ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.) ವತಿಯಿಂದ ಆಧುನಿಕ ಭಾರತದ ನಿರ್ಮಾತೃ ಹಾಗೂ ಮಹಾನ್ ಅಭಿಯಂತರ ‘ಭಾರತರತ್ನ’ ಸರ್ ಎಂ. ವಿಶ್ವೇಶ್ವರಯ್ಯನವರ 165ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: 15-09-2026
ಸಮಯ: ಸಂಜೆ 6:00 ಗಂಟೆಗೆ
ಸ್ಥಳ: ಗಾಯತ್ರಿ ಭವನ, ನಂ. 3070, 9ನೇ ಮೈನ್, ಬನಶಂಕರಿ 2ನೇ ಹಂತ, ಬೆಂಗಳೂರು – 560070
ಮುಖ್ಯ ಅತಿಥಿಗಳು: ಶ್ರೀಯುತ ವೈ.ವಿ. ಗುಂಡೂರಾವ್ (ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಆಧ್ಯಾತ್ಮಿಕ ಚಿಂತಕರು, ಹಾಸ್ಯ ಸಾಹಿತಿಗಳು, ಶ್ರೇಷ್ಠ ವಾಗ್ಮಿಗಳು ಹಾಗೂ ರಂಗಭೂಮಿ ಕಲಾವಿದರು)
ಅಧ್ಯಕ್ಷತೆ: ಶ್ರೀ ಎಸ್. ರಘುನಾಥ್,
ಅಧ್ಯಕ್ಷ,ಅಖಿಲ ಕರ್ನಾಟಕ ಬ್ರಾಹ್ಮಣ
ಮಹಾಸಭಾ
ಆಯೋಜನೆ ಹಾಗೂ ಸ್ವಾಗತ: ಮಹಾಸಭಾದ ಪದಾಧಿಕಾರಿಗಳು, ಜಿಲ್ಲಾ ಪ್ರತಿನಿಧಿಗಳು ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರು
“ಕಾಯಕವೇ ಪೂಜೆ, ಸಫಲತೆಯು ಶ್ರಮದಲ್ಲಿದೆ” ಎಂಬ ಸರ್ ಎಂ. ವಿಶ್ವೇಶ್ವರಯ್ಯನವರ ಆದರ್ಶ ಸಂದೇಶದೊಂದಿಗೆ ಈ ಸಮಾರಂಭವನ್ನು ಆಯೋಜಿಸಲಾಗಿದೆ. ದೇಶ ಕಂಡ ಅಪ್ರತಿಮ ತಂತ್ರಜ್ಞ ಹಾಗೂ ನವ ಭಾರತದ ಶಿಲ್ಪಿಯ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಸಮಾರಂಭಕ್ಕೆ ಸಾರ್ವಜನಿಕರು ಮತ್ತು ಸಮುದಾಯದ ಬಾಂಧವರಿಗೆ ಮುಕ್ತ ಆಹ್ವಾನ ನೀಡಲಾಗಿದೆ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಶ್ರೀಯುತ ವೈ.ವಿ. ಗುಂಡೂರಾವ್ ಅವರು ವಿಶ್ವೇಶ್ವರಯ್ಯನವರ ಜೀವನ-ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಮಹಾಸಭಾದ ಅಧ್ಯಕ್ಷ ಶ್ರೀ ಎಸ್. ರಘುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್. ಶಿವಮೊಗ್ಗ/ ಬೆಂಗಳೂರು




















