
ಬೆಂಗಳೂರು: ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಸಮಿತಿ, ಸಾಮಾಜಿಕ ನ್ಯಾಯಕ್ಕಾಗಿ ಅಹಿಂದ ಜನಜಾಗೃತಿ ಸಂಕಲ್ಪ ವೇದಿಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ಸಮಾರಂಭವನ್ನು ಏರ್ಪಡಿಸಿದ್ದರು. ಸಮಾರಂಭಕ್ಕೆ ಎಲ್ಲಾ ಗಣ್ಯರನ್ನು ಸ್ವಾಗತಿಸಿ, ಗಿಡಕ್ಕೆ ನೀರರೆದು ,ಪ್ರಾರ್ಥನೆಯ ನಂತರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ನಂತರ ಎಲ್ಲಾ ಗಣ್ಯರಿಗೆ ಶಾಲು, ಹಾರ ನೆನಪಿನ ಉಡುಗೊರೆ ನೀಡಿ ಎಲ್ಲರನ್ನೂ ಸನ್ಮಾನಿಸಲಾಯಿತು.
ಪ್ರಾಸ್ತಾವಿಕ ನುಡಿಗಳನ್ನು ಮುತ್ತಣ್ಣ ಎಸ್. ಶಿವಳ್ಳಿ ರಾಜ್ಯಾಧ್ಯಕ್ಷರು ಮಾತನಾಡಿದರು.
ರಾಜ್ಯದಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸಬೇಕಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ಅಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಇದನ್ನು ನೋಡಿ ನನಗೆ ಖುಷಿ ತಂದಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಇವರು ಈ ಭೂಮಿಯ ಮೇಲಿನ ದೇವರಾಗಿದ್ದಾರೆ. ಇವರ ತತ್ವ ಆದರ್ಶಗಳನ್ನು ನಾವು ಮುಂದಿಟ್ಟುಕೊಂಡು ಮುನ್ನುಗ್ಗಬೇಕೆಂದರು. ಹಿಂದುಳಿದ ಜನಾಂಗಗಳನ್ನು ಮುಂದೆ ತರಬೇಕಾಗಿರೋದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಅಂಬೇಡ್ಕರ್ ಅವರು ಬರೆದಂತ ಸಂವಿಧಾನ ಎಲ್ಲರಿಗೂ ಸಮಾನತೆ ತರುತ್ತಿದೆ ಎಂದರು. ಎಲ್ಲರೂ ಸಮಾನ ಮನಸ್ಕಾರಾಗಿ ಬಾಳೋಣ, ಸಮಾನತೆಯಿಂದ ಇರೋಣ ಎಲ್ಲರಿಗೂ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸಿಎಂ ಇಬ್ರಾಹಿಂ ಕೇಂದ್ರ ಮಾಜಿ ಸಚಿವರು ಮಾತನಾಡಿ ನಾವೆಲ್ಲಾ ಹಿಂದೆ ಇಲ್ಲ ಮುಂದಾಗಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಬಾಳೋಣ ಬಸವಣ್ಣ ಬುದ್ಧ ಅಂಬೇಡ್ಕರರ ತತ್ವಗಳನ್ನು ಪಾಲಿಸೋಣ ಎಂದರು.
ಮುಂದಿನ ಚುನಾವಣೆಯಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸೋಣ ಎಂದರು. ಸಮಾರಂಭದಲ್ಲಿ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಓದಿಸಲಾಯಿತು.
ಇದೇ ಸಮಯದಲ್ಲಿ ಎಲ್ಲರಿಗೂ ಗುರುತು ಪತ್ರ, ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತು. ಮದನ್ ಪಾಟೀಲ್, ಲೋಹಿತ್ ನಾಯಕ್,ಶಿವಣ್ಣ, ನೀಲಕಂಠ, ಕುಶಾಲ್ ಪಿರ್ ಸೇರಿದಂತೆ ಇನ್ನೂ ಹಲವಾರು ಗಣ್ಯರು ಭಾಗವಹಿಸಿದ್ದರು.




















