ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುದ್ದಿ ಕಾಯಕಯೋಗಿ ಬಸವಪ್ಪ ಶರಣರ 45ನೇ ಪುಣ್ಯಸ್ಮರಣೆ: ಕೃಷಿ ಪ್ರಶಸ್ತಿ ಪ್ರಧಾನ

ಹುನಗುಂದ: ಪಟ್ಟಣದ ಗುದ್ದಿ ಕಾಯಕಯೋಗಿ ಶ್ರೀ ಬಸವಪ್ಪ ಹಾದಿಮನಿ ಶರಣ ತನ್ನ ದರ್ಶನ ಟ್ರಸ್ಟ್. ತಾಲೂಕ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಬಸವಪ್ಪ ಹಾದಿಮನಿ ಶರಣರ 43ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ಕೃಷಿ ಪ್ರಶಸ್ತಿ ಪ್ರಧಾನ ಹಾಗೂ 44ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಸೆ.11 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ನ್ಯಾಯಲಯದ ಎದುರು ಶರಣರ ಗದ್ದುಗೆ ಹತ್ತಿರ ನಡೆಯಲಿದೆ ಎಂದು ರಾಷ್ಟ್ರ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕ ಸಂಗಣ್ಣ ಎಮ್ಮಿ ಹೇಳಿದರು. ಬುಧವಾರ ಪಟ್ಟಣದ ಖಾಸಗಿ ನಿವಾಸ ಒಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರು ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸುವರು, ಅಮೀನಗಡ-ಯರಿಗೋನಾಳ ಪ್ರಭುಶಂಕರೇಶ್ವರ ಮಠದ ಶಂಕರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮುಧೋಳದ ಸಾಹಿತಿ ಎಂ. ಜಿ. ದಾಸರ ಮುಖ, ಅತಿಥಿಗಳಾಗಿ ಆಗಮಿಸಲಿದ್ದು ಜಮಖಂಡಿ ಹುಲ್ಯಾಳದ ಪ್ರವಚನಕಾರ್ತಿ ಶ್ರೀದೇವಿ ಮಾತಾಜಿ ಅವರು ಶರಣ ಸಂಸ್ಕೃತಿ ಹಾಗೂ ಹಾದಿಮನಿ ಶರಣರ ಕಾಯಕ ನಿಷ್ಠೆ ಅನುಭವ ನೀಡುವರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಎ. ಎಸ್. ಪಾವಟೆ, ತಾಲೂಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭು ಮಾಲಗಿತ್ತಿಮಠ ಉಪಸ್ಥಿತರಿರುವರು. ಈ ಬಾರಿ ಬಸವನ ಹಾದಿಮನಿ ಶರಣ ಟ್ರಸ್ಟ್ ವತಿಯಿಂದ ನೀಡುವ ಜಿಲ್ಲಾ ಮಟ್ಟ ಪ್ರಶಸ್ತಿಗೆ ಹುನಗುಂದದ ಸಂಗಣ್ಣ ಸಣ್ಣ ಸಂಗಪ್ಪ ನಾಗರಾಳ ಗದ್ದನಕೇರಿಯ ವಿದ್ಯಾ ಪರ್ವತಪ್ಪ ಬಾವಿ ಹೂವಿನಹಳ್ಳಿಯ ಬಸಪ್ಪ ಶಿವಪ್ಪ ಕೆಂದೂರ ಬಾಜಿನರಾಗಿದ್ದಾರೆ ಎಂದು ದರ್ಶನ ಟ್ರಸ್ಟಿನ ಕಾರ್ಯಾಧ್ಯಕ್ಷ ವೈ.ಎಂ. ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತು, ಅಧ್ಯಕ್ಷ ಎಸ್.ಎನ್.ಹಾದಿಮನಿ, ಅನ್ನದಾನೇಶ್ವರ ಶಿವಲಿಂಗಪ್ಪ ಹಾದಿಮನಿ ಇದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!