ಬಾಗಲಕೋಟೆ/ ಮುಧೋಳ : ಕಳೆದ ಎಂಟು ವರ್ಷ ಏಳು ತಿಂಗಳುಗಳಿಂದ ನಿರಂತರವಾಗಿ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ “ತತ್ವದರ್ಶನ” ಮನೆಯಂಗಳದಲ್ಲಿ ಶರಣರ ಮನದ ಮಾತು ಮಾಸಿಕ ಕಾರ್ಯಕ್ರಮವು ಭಕ್ತಿ ಶ್ರದ್ಧೆಯಿಂದ ನಡೆದುಕೊಂಡು ಬಂದಿರುವುದು ಜನಜನಿತ. ಈಗ 104 ನೇ ಮಾಸಿಕ ಕಾರ್ಯಕ್ರಮವು ಶನಿವಾರ ದಿ. 12 ರಂದು ಜಗದ್ಗುರು ಸಿದ್ಧಾರೂಢರ ಪಾದುಕಾ ಪಂಚಾಮೃತ ಅಭಿಷೇಕ. ಸಹಸ್ರ ಬಿಲ್ವಾರ್ಚನೆ. ಓಂಕಾರ ನಾಮಸ್ಮರಣೆ. ಸಾಮೂಹಿಕ ಭಜನೆ ಹಾಗೂ 2026 ಶ್ರಾವಣ ಮಾಸದ ಸಂಭ್ರಮ. ತನ್ನಿಮಿತ್ಯ ನಡೆದ ಶ್ರೀ ಸಿದ್ಧಾರೂಢರ ಕಥಾಮೃತ ಪುರಾಣ ಮಂಗಲ ಕಾರ್ಯಕ್ರಮವು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುವವು ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಯುವ ಮುಖಂಡ ಶ್ರೀನಿವಾಸ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















