ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೊಟ್ಟೂರು ಪಟ್ಟಣದಲ್ಲಿ ಉಚಿತ ನೀರಿನ ಅರವಟ್ಟಿಗೆಗೆ ಚಾಲನೆ ನೀಡಿದ ಡಿ ಎಸ್ ಎಸ್ ಬದ್ದಿ ಮರಿಸ್ವಾಮಿ

ವಿಜಯನಗರ ಜಿಲ್ಲೆ ಕೊಟ್ಟೂರು:ವಿಶ್ವಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಭಾರತ ದೇಶಕ್ಕೆ ವಿಶ್ವದ ಶ್ರೇಷ್ಠವಾದ ಸಂವಿಧಾನವನ್ನು ಕೊಡುಗೆ ನೀಡಿದವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಈ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇದ್ದಾಗ ಅಂಬೇಡ್ಕರ್ ಅವರಿಗೆ ನೀರು ಸಹ ಕೊಡಲಿಲ್ಲ ಇದು ದುಃಖದ ಸಂಗತಿ ಆದರೆ ಇಂತಹ ಅವಮಾನವನ್ನು ಸಹಿಸಿಕೊಂಡು ವಿದ್ಯೆಯೇ ವಿಮೋಚನೆಯ ಹೆದ್ದಾರಿ ಎಂದು ಅಪಾರವಾದ ಜ್ಞಾನವನ್ನು ಸಂಪಾದಿಸಿ ಈ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದರು ಇಂದು ಅವರ ಹೆಸರಿನಲ್ಲಿ ಉಚಿತವಾಗಿ ನೀರಿನ ಅರವಟ್ಟಿಗೆಯನ್ನು ಕೊಟ್ಟೂರು ಪಟ್ಟಣದ ಬಸ್ ಸ್ಟ್ಯಾಂಡ್ ಮುಂಬಾಗದಲ್ಲಿ ನೀರಿನ ಅರವಟ್ಟಿಗೆಯನ್ನು ಏರ್ಪಡಿಸಲಾಗಿದೆ ನೀರಿನ ಅರವಟ್ಟಿಗೆಯಿಂದ ಹಳ್ಳಿಯಿಂದ ಬಂದ ರೈತರಿಗೆ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ನೀರಿನ ಅನುಕೂಲವಾಗುವುದು ಎಂದು ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಡಿ ಎಸ್ ಎಸ್ ಬದ್ದಿ ಮರಿಸ್ವಾಮಿ ಹೇಳಿದರು ನಂತರ ಟೇಪ್ ಕತ್ತರಿಸುವ ಮೂಲಕ ನೀರಿನ ಅರವಟ್ಟಿಗೆಗೆ ಚಾಲನೆಯನ್ನು ನೀಡಿದರು ನಂತರ ದಲಿತ ವಿದ್ಯಾರ್ಥಿ ಪರಿಷತ್ ಕೆ ಶಿವರಾಜ್ ತಾಲೂಕ್ ಅಧ್ಯಕ್ಷರು ಮಾತನಾಡಿ ನೀರಿನ ದಾಹ ಕಂಡಿದ್ದು ಅಂಬೇಡ್ಕರ್ ಅವರು ಇಂದು ಅಂಬೇಡ್ಕರ್ ಅವರ ಹೆಸರಿನಲ್ಲಿ ಉಚಿತವಾಗಿ ಬೇಸಿಗೆ ಮುಗಿಯುವ ತನಕ ನೀರಿನ ಅರವಟ್ಟಿಗೆಯನ್ನು ಏರ್ಪಡಿಸಲಾಗುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ತಿರುಕಪ್ಪ ನವೀನ್ ಸ್ವಾಮಿ ಪವನ್ ಉದಯ್ ಇನ್ನು ಅನೇಕ ಜನರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ