ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೊಪ್ಪಳ ಜಿಲ್ಲಾ ಪೊಲೀಸ್ ಪ್ರಕಟಣೆ


ಕೊಪ್ಪಳ ದಿನಾಂಕ 20-10-2022 ರಂದು ಸಂಜೆ 6-00 ಗಂಟೆಗೆ ಶ್ರೀ ಮೆಹಬೂಬ ಸಿಕಲಗಾರ ಸಾ.ಕನಕಗಿರಿ ಇವರ ಫಿರ್ಯಾದಿ ಮೇಲಿಂದ ಸದರಿಯವರ ಆಪ್ತಾಪ್ತ ಮಗಳ ಹೆಸರನ್ನು ಅನಾಮಧೇಯ ಆರೋಪಿತನು ಕನಕಗಿರಿ ಪಟ್ಟಣದ ಸಾರ್ವಜನಿಕ ಸ್ಥಳಗಳ ಗೋಡೆಗಳ ಮೇಲೆ ಶಾಲಾ ಕಾಲೇಜುಗಳ ಗೋಡೆಗಳ ಮೇಲೆ ಅಶ್ಲೀಲವಾಗಿ ಹೆಣ್ಣುಮಕ್ಕಳ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ಬರೆದಿರುವುದಾಗಿ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿನಿಂದ ಈ ಹಿಂದೆ ಕನಕಗಿರಿ ಪೊಲೀಸ್ ಠಾಣಾ ಗುನ್ನೆ ಸಂ.116/2022 ಕಲಂ:354(ಎ), 294 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ದಿನಾಂಕ: 11-07-2013 ರಂದು ಫಿರ್ಯಾದಿದಾರರಾದ ಶ್ರೀ ಹುಸೇನಬಾಷಾ ತಂದ ಅಕ್ಷೀರಸಾಲ ಸಾ.ಕನಕಗಿರಿ ರವರ ಫಿರ್ಯಾದಿ ಮೇಲಿನಿಂದ ಸದರಿಯವರ ಅಪ್ರಾಪ್ತ ಮಗಳ ಹೆಸರನ್ನು ಇನ್‌ಸ್ಟಾಗ್ರಾಂದಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಅಶ್ಲೀಲ ಪದಗಳನ್ನು ಬಳಸಿ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಂದೇಶವನ್ನು ಹಾಕಿದ್ದು ಇರುತ್ತದೆ ಮುಂತಾದ ಸಾರಾಂಶದ ಮೇಲಿಂದ ಕನಕಗಿರಿ ಪೊಲೀಸ್ ಠಾಣಾ ಗುನ್ನೆ ಸಂ.93/2023 ಕಲಂ,504, 505, 506, 507, 509 ಐಪಿಸಿ 66(A), 67(ಬಿ) ಐ.ಟಿ ಕಾಯ್ದೆ 2008ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಹೆಚ್ಚಿನ ತಾಂತ್ರಿಕ ತನಿಖೆ ಕುರಿತು ಕೊಪ್ಪಳದ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಿಗೆ ವಹಿಸಲಾಗಿತ್ತು.
ಪ್ರಕರಣ:ಅತೀ ಸೂಕ್ಷ್ಮತೆಯಿಂದ ಕೂಡಿದ್ದರಿಂದ ಮತ್ತು ಪ್ರಕರಣವನ್ನು ಪತ್ತೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿ ಮಾರ್ಪಟ್ಟಿದ್ದರಿಂದ ಈ ಎರಡೂ ಪ್ರಕರಣಗಳ ಆರೋಪಿತನ ಪತ್ತೆ ಕುರಿತಂತೆ ಶ್ರೀಮತಿ ಯಶೋಧ ವಂಟಗೋಡಿ ಐ.ಪಿ.ಎಸ್ ಜಿಲ್ಲಾ ಪೊಲೀಸ್ ಆಧೀಕ್ಷಕರು,ಕೊಪ್ಪಳರವರ ಮಾರ್ಗದರ್ಶನದಲ್ಲಿ ಶ್ರೀ ರುದ್ರೇಶ ಉಜ್ಜನಕೊಪ್ಪ ಡಿ.ಎಸ್.ಪಿ ಗಂಗಾವತಿ ಉಪ ವಿಭಾಗ ರವರ ನೇತೃತ್ವದಲ್ಲಿ ಜಗದೀಶ ಕೆ.ಜಿ ಪಿ.ಐ ಕನಕಗಿರಿ ಹಾಗೂ ಗವಿಸಿದ್ದಯ್ಯ ಸಿಪಿಸಿ-450, ಗವಿಕುಮಾರ ಸಿಪಿಸಿ-201, ಬಸವರಾಜ ಸಿಪಿಸಿ-128 ರವರನ್ನು ಒಳಗೊಂಡ ಹಾಗೂ ಆಮರೇಶ ಹುಬ್ಬಳ್ಳಿ ಪಿ.ಐ ಸನ್ ಪೊಲೀಸ್ ಠಾಣೆ ಕೊಪ್ಪಳ ಹಾಗೂ ದಸ್ತಗಿರಿ ಸಿ.ಪಿ.ಸಿ-251, ಬಸವರಾಜ ಅಂಗಡಿ ಹೆಚ್.ಸಿ-264, ಶ್ರೀಮತಿ ಸವಿತಾ ಸಜ್ಜನ್ ಪಿಸಿ-259, ಕೋಟೆಕ್ ಹೆಚ್ಸಿ-36 ಮತ್ತು ಪ್ರಸಾದ ಎಪಿಸಿ-166 ರವರನ್ನು ಒಳಗೊಂಡ ಎರಡು ತಂಡಗಳನ್ನು ರಚನೆ ಮಾಡಿ
ಸದರಿ ಉಭಯ ತಂಡಗಳು ತನಿಖಾ ಕಾಲಕ್ಕೆ ಹಲವಾರು ಜನರನ್ನು ವಿಚಾರಣೆ ಮಾಡಿದ್ದು,ಈ ವೇಳೆ ಅನುಮಾನಾಸ್ಪದವಾಗಿ ಕಂಡು ಬಂದ ಮಹಬೂಬ ತಂದೆ ಹಸನ್‌ಸಾಬ ಸಿಕಲಗಾರ,ವಯಸ್ಸು:27ವರ್ಷ ಸಾ‌.ಕನಕರಿ ಈತನನ್ನು ಕೂಲಂಕುಷವಾಗಿ ವಿಚಾರಿಸಲು ಮೆಹಬೂಬ ಈತನು ಅಪ್ರಾಪ್ತ ಬಾಲಕಿಯನ್ನು ಕಳೆದ 02 ವರ್ಷಗಳಿಂದ ಪ್ರೀತಿಸುತ್ತಿದ್ದು,ಕೆಲವೊಮ್ಮೆ ಬಾಲಕಿಯು ಮೆಹಬೂಬನೊಂದಿಗೆ ಮಾತನಾಡಿಸುವುದನ್ನು ನಿಲ್ಲಿಸಿದಾಗ ಗೋಡೆಯ ಮೇಲೆ ಆಶೀಲವಾಗಿ ಬರೆದಿದ್ದರಿಂದ ಆಕೆಯು ಮತ್ತೊಮ್ಮೆ ತನ್ನೊಂದಿಗೆ ಮೊಬೈಲದಲ್ಲಿ ಮೆಸೆಜ್ ಮಾಡುವುದು,ಮಾತನಾಡುವುದು ಪ್ರಾರಂಭಿಸಿದ್ದನ್ನು ನೋಡಿ ಆಪಾಪ್ತ ಬಾಲಕಿ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಾಗ ಹೀಗೆ ಗೋಡೆಯ ಮೇಲೆ ಹೆಚ್ಚು ಹೆಚ್ಚು ಬರೆಯಲು ಪ್ರಾಂಭಿಸಿದನು.ಈ ವರ್ಷದ ಜೂನ್ ತಿಂಗಳ ಪ್ರಾರಂಭದಲ್ಲಿ ಅಪ್ರಾಪ್ತ ಬಾಲಕಿಯು ಆಪಾದಿತನಿಗೆ ನೀವು ಬಡವರಿದ್ದೀರಿ ನಮ್ಮ ಮನೆಯಲ್ಲಿ ನನಗೆ ಸರಕಾರಿ ನೌಕರಿ ಇರುವ ಹುಡುಗನಿಗೆ ನೋಡಿ ಮದುವೆ ಮಾಡುತ್ತೇವೆ ಎಂದಿದ್ದಾರೆ ಆದ್ದರಿಂದ ನೀನು ಇನ್ನು ಮುಂದೆ ನನ್ನೊಂದಿಗೆ ಮಾತನಾಡುವುದು ಬೇಡ ಅಂತಾ ಹೇಳಿದ್ದರಿಂದ,ಅಪ್ರಾಪ್ತ ಬಾಲಕಿಯನ್ನು ಒಬ್ಬಂಟಿ ಮಾಡಬೇಕು,ಅವಳ ಜೊತೆಯಲ್ಲಿ ಯಾರೂ ಮಾತನಾಡಬಾರದು ಮತ್ತು ಓಡಾಡಬಾರದು ಎಂದು ಅಪ್ರಾಪ್ತ ಬಾಲಕಿಯ ಸ್ನೇಹಿತರ,ಅವರ ಅಕ್ಕಂದಿರ ಮತ್ತು ಈ ಹಿಂದೆ ಬಾಲಕಿಯೊಂದಿಗೆ ಓದಿದ್ದ ಹುಡುಗರ ಹೆಸರುಗಳಲ್ಲಿ ಗೋಡೆಯ ಮೇಲೆ ಬರೆದು ಇನಸ್ಟಾಗ್ರಾಂ ಮೂಲಕ ಅಶ್ಲೀಲ ಚಿತ್ರಗಳನ್ನು ಎಡಿಟ್ ಮಾಡಿ ಆಪ್ತಾಪ್ತ ಬಾಲಕಿಯ ಪಾಲಕರ ಮತ್ತು ಸ್ನೇಹಿತರ ಗುಂಪುಗಳಿಗೆ ಕಳಿಸಿದ್ದಾಗಿ ತನ್ನೊಪ್ಪಿಕೊಂಡಿರುತ್ತಾನೆ. ತನಿಖೆ ವೇಳೆ ಕೃತ್ಯಕ್ಕೆ ಉಪಯೋಗಿಸಿದ ಇನ್‌ಸ್ಟಾಗ್ರಾಂ ಖಾತೆಯು ಆಪಾದಿತ ಮೆಹೆಬೂಬ ತಂದೆ ಹಸನ್‌ಸಾಬ ಈತನದ್ದೇ ಆಗಿದ್ದು,ನಕಲಿ ಇನ್‌ಸ್ಟಾಗ್ರಾಂ ಖಾತೆಯನ್ನು ಸೃಷ್ಟಿಸಿ ಕೃತ್ಯವೆಸಗಿದ್ದು ಖಚಿತವಾಗಿದ್ದರಿಂದ ಆಪಾದಿತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗಿದೆ.
ಸಾಮಾಜಿಕ ಜಾಲತಾಣ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಗಂಭೀರ ಸ್ವರೂಪವನ್ನು ಪಡೆದಿದ್ದ ಕನಕಗಿರಿಯ ಶಾಲಾ ಗೋಡೆ ಬರಹ ವಿಷಯದ ಪ್ರಕರಣವನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು,ಕೊಪ್ಪಳರವರು ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ನಗದು ಬಹುಮಾನ ಘೋಷಣೆ ಮಾಡಿರುತ್ತಾರೆ ಎಂದು ಪೊಲೀಸ್ ಅಧೀಕ್ಷಕರು ಕೊಪ್ಪಳ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ