ಮುಂಡಗೋಡ ದಲ್ಲಿ ಇಂದು ದಾಸ ಶ್ರೇಷ್ಠ ಕನಕದಾಸರ ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಜಿಲ್ಲಾ ಮಟ್ಟದ ಜಯಂತಿ ಕಾರ್ಯಕ್ರಮ ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.ಶಿರಸಿ ಉಪ ವಿಭಾಗದ ಸಹಾಯಕ ಆಯುಕ್ತರಾದ ಆರ್, ದೇವರಾಜ್, ತಾಲೂಕಿನ ಕುರುಬ ಸಮಾಜದ ಮುಖಂಡರು, ಅತ್ತಿವೇರಿ ಪೀಠದ ಪರಮ ಪೂಜ್ಯ ಮಾತೆ ಅವರು,
ಮುಂಡಗೋಡ ತಾಲೂಕ ಆಡಳಿತ ದ ಮುಖ್ಯಸ್ಥರಾದ ತಹಶೀಲ್ದಾರ ಶ್ರೀ ಶಂಕರ ಗೌಡಿ, ಮಾಜಿ ಶಾಸಕ ವಿ ಎಸ್ ಪಾಟೀಲರು ಹಾಗೂ ಡೊಳ್ಳು ಕುಣಿತ ಕಲಾ ತಂಡಗಳು ಭಾಗವಹಿಸಿದ್ದವು. ತಾಲೂಕಾ ಆಡಳಿತ ಕಾರ್ಯಕ್ರಮವನ್ನು ಶಿಸ್ತು ಬದ್ಧವಾಗಿ ಆಯೋಜನೆ ಮಾಡಿತು. ಒಟ್ಟಿನಲ್ಲಿ ಶ್ರೇಷ್ಠ ನಾಯಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಗಳು ಅರ್ಥಪೂರ್ಣವಾಗುತ್ತದೆ.




















