ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಸ್.ಡಿ.ಎಮ್ ಮಕ್ಕಳ ದಂತ ವೈದ್ಯರ ತಂಡದಿಂದ ತಂಬಾಕಿನ ವಿರುದ್ಧ “ಕೊನೆ ಉಸಿರು” ಬೀದಿ ನಾಟಕ ಪ್ರದರ್ಶನ

ನಿರಂತರ ಜನ ಸೇವೆಯಲ್ಲಿ ತೊಡಗಿರುವ ಸಂಸ್ಥೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಅಂಗಸಂಸ್ಥೆ ಎಸ್.ಡಿ.ಎಮ್ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಕುಲಪತಿಗಳಾದ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು, ಉಪಕುಲಪತಿಗಳಾದ ಡಾ.ನಿರಂಜನಕುಮಾರ,ಆಡಳಿತ ನಿರ್ದೇಶಕರಾದ ಶ್ರೀ ಸಾಕೇತ ಶೆಟ್ಟಿ,ಪ್ರಾಂಶುಪಾಲರಾದ ಡಾ.ಬಲರಾಮ ಡಿ ನಾಯಕ ಹಾಗೂ ಮಕ್ಕಳ ದಂತ ಚಿಕಿತ್ಸೆ ವಿಭಾಗದ ಮುಖ್ಯಸ್ಥೆಯಾದ ಡಾ.ಶೃತಿ ಬಿ ಪಾಟೀಲ,ಸಿಬ್ಬಂದಿಯವರಾದ ಡಾ.ಪ್ರಿಯಾ ಮೆಹರವಾಡೆ ಹಾಗೂ ತಂಡದ ವತಿಯಿಂದ ಇತ್ತೀಚೆಗೆ ಹುಬ್ಬಳ್ಳಿಯ ಸರಕಾರಿ ಆಸ್ಪತ್ರೆಯೊಂದರಲ್ಲಿ ಅಡಿಕೆ ಮತ್ತು ತಂಬಾಕು ಸೇವನೆಯ ದುಷ್ಪಪರಿಣಾಮದ ಕುರಿತು ತಪಾಸಣೆ ಶಿಬಿರ ಮತ್ತು ಕೊನೆ ಉಸಿರು” ಎಂಬ ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.

ಉತ್ತರಕರ್ನಾಟಕ ಭಾಗದ ಜನ ಸಾಮಾನ್ಯರಲ್ಲಿ ಹಾಗೂ ಮಕ್ಕಳಲ್ಲಿ ತಂಬಾಕು ಸೇವನೆಯು ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದಾಗುವ ವಿವಿಧ ರೀತಿಯ ಹಾನಿಕಾರಕ ಸಮಸ್ಯೆಗಳೆಂದರೆ ಹಲ್ಲುಗಳ ಮಾಸುತ್ತದೆ, ಹಲ್ಲುಗಳು ಸವಿಯುತ್ತವೆ ಮತ್ತು ವಸಡಿನ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಮುಖದ ಬಣ್ಣ ಚೆಂದ ಹಾಳಾಗುತ್ತದೆ. ಬಾಯಿಯಲ್ಲಿ ಹುಣ್ಣು, ಬಾಯಿಯ ದುರ್ವಾಸನೆ, ಕ್ಯಾನರ ಪೂರ್ವ ಬಾಯಿಯ ಖಾಯಿಲೆಗಳು, ಹೃದಯದ ಖಾಯಿಲೆಗಳು, ಉಬ್ಬಸ, ಬಂಜೆತನ, ಅನ್ನನಾಳದ ಕ್ಯಾನರ ಹಾಗೂ ಶ್ವಾಸಕೋಶದ ಕ್ಯಾನ್ಸರ ಉಂಟಾಗುತ್ತದೆ.

ಈ ವಿಷೇಶ ತಿಳುವಳಿಕೆಯನ್ನು ಜನರಿಗೆ ತಪಾಸಣೆ ಮತ್ತು ಬೀದಿ ನಾಟಕದ ಮೂಲಕ ನೀಡಲಾಯಿತು. ಇದು ಜನರಲ್ಲಿ ಆಸಕ್ತಿ ಮತ್ತು ಜಾಗೃತಿ ಮೂಡಿಸುವದರಲ್ಲಿ ಅತ್ಯಂತ ಯಶಸ್ವಿಯಾಯಿತು.
ವರದಿ:ಯೂಸುಫ್ ಎನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!