ಸಿಂಧನೂರು// ಎ.04.ಸಿಂಧನೂರು ವಿಧಾನಸಭಾ ಕ್ಷೇತ್ರದ 2023 ಚುನಾವಣೆಯ ಪ್ರಚಾರವು ಬೀಸಲು ನಾಡಿನಲ್ಲಿ ದಿನ ದಿನಕ್ಕೆ ರಂಗೇರುತ್ತಿದ್ದು, ಇಂದು ಮಾಜಿ ಶಾಸಕ ಶ್ರೀ ಹಂಪನಗೌಡ ಬಾದರ್ಲಿ ಯವರ 2013-2018 ರ ಆಡಳಿತ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು, ಅವರ ನಾಯಕತ್ವವನ್ನು, ಕಾಂಗ್ರೇಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ, ಬಾಬುಗೌಡ ಬಾದರ್ಲಿ ಇವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ದುರಾಢಳಿತಕ್ಕೆ ಬೆಸತ್ತು ಇಂದು ಗೊರೆಬಾಳಕ್ಯಾಂಪಿನ ಎಸ್.ಸಿ ವಾರ್ಡಿನ ಅಂಬಣ್ಣ ಹಡಪದ, ವೇಂಕಟೇಶ, ನಾಗಪ್ಪ, ತಿಮ್ಮಣ್ಣ, ಸುನಿತಾ, ಸುಜಾನ, ಪದ್ಮಮ್ಮ, ಜಯಮ್ಮ ಸೇರಿದಂತೆ ಆನೇಕ ಮುಖಂಡರು, ಮಹಿಳಾ ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೇಸ್ ಪಕ್ಷಕ್ಕೆ ಆಗಮಿಸಿದ ಆತ್ಮೀಯ ಯುವ ನಾಯಕರಿಗೆ, ಮುಖಂಡರಿಗೆ ಪ್ರೀತಿಯ ಸ್ವಾಗತ ಕೋರುತ್ತೇವೆಂದು ಬಾಬುಗೌಡ ಬಾದರ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಣ್ಣ ಬೀಮನಗೌಡರು, ಎನ್,ಅಮರೇಶ, ರಂಗನಗೌಡ ಗೊರೆಬಾಳ, ಪಾಲಕ್ಷಗೌಡ ಗೊರೆಬಾಳ, ಹುಲುಗಪ್ಪ ಮಾಸ್ಟರ್, ಮರಿಯಪ್ಪ ಜಾಲಿಹಾಳ, ಅಧ್ಯಕ್ಷರು ಮಾದಿಗ ಸಮಾಜ,ವಿರುಪಣ್ಣ ಗೊರೆಬಾಳ, ಲಕ್ಷ್ಮಣರಾವ್ ಮೂಡಲಗಿರಿ ಕ್ಯಾಂಪ್,ಗ್ರಾಮ ಪಂಚಾಯಿತಿಯ ಸದಸ್ಯರಾದ ಪಾಸ್ಟರ್ ರಾಜು, ಹಾಗೂ ರಾಮಣ್ಣ ಸಾಸಲಮರಿ, ಬಸವರಾಜಗೌಡ ಅಮರಾಪುರ, ಕೃಷ್ಣರೆಡ್ಡಿ, ಆನಂದಗೌಡ ಬೊಮ್ಮನಾಳ, ಸಮಾಜೀಕ ಜಾಲತಾಣದ ವಾಗೇಶ ಶ್ರೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ಧರು.
ವರದಿ ವೆಂಕಟೇಶ.H.ಬೂತಲದಿನ್ನಿ




















