ಸಿಂಧನೂರು ತಾಲೂಕಿನ ಜವಳಗೇರದ ಕೊಪ್ಪಳ ಕ್ಯಾಂಪ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ 35ನೇ ಹುಟ್ಟು ಹಬ್ಬದ ಅಂಗವಾಗಿ 500 ಸಸಿಗಳ ನೆಡುವ ಕಾರ್ಯಕ್ರಮ ಹಾಗೂ ವಿಶೇಷ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ವಿಶೇಷವಾಗಿ ಮೊರಾರ್ಜಿ ಶಾಲೆಯಲ್ಲಿ ಮಕ್ಕಳಿಗೆ ಶ್ರಮವಹಿಸಿ ರುಚಿಯಾದ ಅಡುಗೆ ಮಾಡಿ ಉಣಬಡಿಸುವ ಅಡುಗೆದಾರರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸದಾನಂದ ಶರಣರು ಬಂಗಾರಿ ಕ್ಯಾಂಪ್,ವೇದಮೂರ್ತಿ ಮಾದಯ್ಯ ಗುರವಿನ ಅಮೋಘ ಸಿದ್ಧೇಶ್ವರ ಮಠ ತುರವಿಹಾಳ,ಅಮರಯ್ಯ ಶಾಸ್ತ್ರೀ ಎಲೆಕೂಡ್ಲಿಗಿ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸೋಮಶೇಖರ ಪಾಟೀಲBEO,ದೊಡ್ಡಬಸನಗೌಡ ಬಾದರ್ಲಿ ಕಾಂಗ್ರೆಸ್ ಮುಖಂಡರು,ಕೆ.ಕರಿಯಪ್ಪBJP ಮುಖಂಡರು,ಶಿವನಗೌಡ ಗೊರೆಬಾಳ,ಬಸವರಾಜ AEE.ಅತಿಥಿಗಳಾಗಿ ಸುರೇಶ ನೆಕ್ಕಂಟಿ,ಸುರೇಶ ಸೈನಿಕರು, ಮೌನೇಶ ತಿಡಿಗೋಳ ವಿಶ್ವಕರ್ಮ ತಾಲೂಕ ಅದ್ಯಕ್ಷರು,ಬೀರಪ್ಪ ಶಂಭೋಜಿ,ತಿಮ್ಮಾರಡ್ಡಿ, ಅಮರಯ್ಯ ಪತ್ರಿಮಠ,ತಿಪ್ಪಾರಡ್ಡಿ,ಬಾಲಕೃಷ್ಣ ವಜ್ಜಲ, ನಿರೂಪಣೆಯನ್ನು ಹನುಮೇಶ ಶಿಕ್ಷಕರು,ಸ್ವಾಗತ ಸಣ್ಣಹುಸೇನಪ್ಪ ಶಿಕ್ಷಕರು,ಪ್ರಾಸ್ತಾವಿಕ ಭಾಷಣ ಮೌನೇಶ ಶಿಕ್ಷಕರು,ವಂದನಾರ್ಪಣೆ ಲಕ್ಷೀವೆಂಕಟೇಶ ಶಿಕ್ಷಕರು ಮಾಡಿದರು.




















