ಅಂಗನವಾಡಿಗಳ ಸ್ವಚ್ಛತೆಗೆ ಮೊದಲ ಆದ್ಯತೆ:
ಸಿ ಡಿ ಪಿ ಓ ಸುನಿತಾ ಡಿ ಜಿ
ಪಾವಗಡ:ಪ್ರತಿ ಶನಿವಾರ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತಾ ದಿನವನ್ನಾಗಿ ಆಚರಣೆ ಮಾಡಲು ಸೂಚಿಸಿರುವುದಾಗಿ ಸಿ ಡಿ ಪಿ ಓ ಸುನಿತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿಯರು ಮಕ್ಕಳ ಪಾಲಿಗೆ ತಾಯಿಯಂತೆ, ಕಾರ್ಯಕರ್ತೆಯರು ಶಿಕ್ಷಕಿ ಇದ್ದಂತೆ.ಆದ್ದರಿಂದ ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಜೊತೆಗೆ ಮಕ್ಕಳಿಗೆ ಸರಿಯಾಗಿ ಅಡುಗೆ ಮಾಡಿ ಹಾಕುವುದು ಗುರು ತರದ ಜವಾಬ್ದಾರಿ ಎಂದರು.
ಅಂಗನವಾಡಿ ಶಾಲೆಗೆ ಬರುವ ಮಕ್ಕಳ ಆರೋಗ್ಯ ನಿಮಿತ್ತ ಅಂಗನವಾಡಿ ಶಾಲೆಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದೆಂದು, ಅಂಗನವಾಡಿಯ ಒಳಗೆ ಮತ್ತು ಹೊರಗಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ರಾಜ್ಯಾದಾದ್ಯಂತ ಡೆಂಗ್ಯೂ ಭೀತಿ ಇದ್ದು,ನೀರಿನ ಆರೋಗ್ಯಕರ ಶೇಖರಣೆ ಬಗ್ಗೆ ಗಮನಹರಿಸಿ, ಅಂಗನವಾಡಿಯ ಸುತ್ತಮುತ್ತ ಅನುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು, ನೀರು ಶೇಖರಿಸುವ ತೊಟ್ಟಿಗಳನ್ನು ಪ್ರತಿ 5 ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು ಇದರಿಂದ ಡೆಂಗ್ಯೂ ಜ್ವರ ಬರದಂತೆ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.




















