ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಪಡಿಸಿ ಸಾರ್ವಜನಿಕರ ಮೆಚ್ಚುಗೆ ಪಡೆದ ಅಧಿಕಾರಿಗಳು.
ಯಾದಗಿರಿ /ಗುರುಮಠಕಲ್ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಗುರುಮಠಕಲ್ ಉಪ ಮಾರುಕಟ್ಟೆಯ ಪ್ರಾಂಗಣದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿ ಕುರಿತಾಗಿ ಕಳೆದ ಏಪ್ರಿಲ್ 16 ರ ಕರುನಾಡ ಕಂದ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಸ್ಥಳೀಯ ಹೋರಾಟಗಾರರು ತಮ್ಮ – ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ವೈರಲ್ ಕೂಡಾ ಮಾಡಿ ಪತ್ರಿಕೆಯ ವರದಿಗೆ ಮೆಚ್ಚುಗೆ ಹಾಗೂ ಸ್ಥಳೀಯ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು.
ಈ ವರದಿಗೆ ಎಚ್ಚೆತ್ತು ಕಳೆದ ವಾರದಿಂದ ಕುಡಿಯುವ ನೀರಿನ ಘಟಕವನ್ನು ದುರಸ್ತಿಪಡಿಸಿ , ಇಲ್ಲಿ ಬರುವ ರೈತರಿಗೆ ನೀರಿನ ಸೌಲಭ್ಯ ಸಿಗುವಂತಾಗಿದೆ.
ಈ ಕುರಿತು ಕಾರ್ಯದರ್ಶಿಗಳಾದ ಶಿವಕುಮಾರ ದೇಸಾಯಿ ಮಾತನಾಡಿ ತಮ್ಮ ಮೂಲಕ ನಮಗೆ ಸಮಸ್ಯೆ ಕುರಿತು ಅರಿವಾಗಿದೆ, ಪ್ರತಿ ಬಾರಿ ಸಮಸ್ಯೆ ಆದಾಗ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳದೆ, ಈ ಬಾರಿ ಮತ್ತೆ ಸಮಸ್ಯೆ ಬಾರದಂತೆ ಮುಂದೆ ನೋಡಿ ಕೊಳ್ಳಲಾಗುತ್ತದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. ನಿರ್ವಾಹಕರಾದ ಜಗದೀಶ್ ಅವರು ಶುದ್ದ ನೀರಿನ ಘಟಕ ಪ್ರಾರಂಭವಾಗಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ




















