ಯಾದಗಿರಿ: ಯಾದಗಿರಿ ಜಿಲ್ಲಾಧಿಕಾರಿಗಳು ಇಂದು (ಅ.೮) ಶಹಾಪೂರ ಪಟ್ಟಣದ ವಿವಿಧ ಆಗ್ರೋ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಖರೀಫ ಋತುವಿನ ಸಂಧರ್ಭದಲ್ಲಿ ಕೃಷಿಕರಿಗೆ ಅಗತ್ಯವಿರುವ ರಸಗೊಬ್ಬರದ ದಾಸ್ತಾನು ಮತ್ತು ಲಭ್ಯತೆ ಬಗ್ಗೆ ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು.
ಈ ಸಂದರ್ಭ ಅಧಿಕಾರಿಗಳು ಸ್ಥಳೀಯ ಮಾರಾಟಗಾರರೊಂದಿಗೆ ಸಂವಾದ ನಡೆಸಿ, ರಸಗೊಬ್ಬರದ ಸರಬರಾಜು, ದರಗಳು ಹಾಗೂ ಸ್ಟಾಕ್ ಬುಕ್ಗಳ ಬಗ್ಗೆ ಮಾಹಿತಿಯನ್ನು ಪಡೆದು ದಾಖಲಾತಿಗಳನ್ನು ಪರಿಶೀಲಿಸಿದರು. ಜೊತೆಗೆ ರೈತರಿಗೆ ಯಾವುದೇ ಅಸೌಕರ್ಯ ಆಗದಂತೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿ ರೈತ ಸಮುದಾಯದಲ್ಲಿ ಹರ್ಷಕ್ಕೆ ಕಾರಣವಾಗಿದ್ದು, ಅವರು ಈ ರೀತಿಯ ಕ್ರಮಗಳಿಂದ ದಾಸ್ತಾನು ದುರುಪಯೋಗ, ಅಹಿತಕರ ಮಾಲು ವಿತರಣೆ ಮತ್ತು ಅಕ್ರಮ ಮಾರಾಟ ತಪ್ಪಿಸಬಹುದು ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ




















