ಜೀವವ ಕೊಟ್ಟ ದೈವ ಜನಕ
ತಿದ್ದಿ ಬುದ್ಧಿಯ ಹೇಳಿದ ಶಿಕ್ಷಕ
ಸಂಸಾರ ನೊಗ ಹೊತ್ತ ರಕ್ಷಕ
ಕಷ್ಟ ನಷ್ಟಗಳ ಗೆದ್ಧಿಹ ಸಾಧಕ.
ಹೆಗಲ ಮೇಲೆ ಹೊತ್ತು ಮೆರೆದ
ಜಗದ ಅಂದ ಚೆಂದ ತೋರಿದ
ಖುಷಿ ನೋಡಿ ಸಂತಸ ಪಡೆದ
ಬೆವರ ಹನಿ ಮರೆತು ಹೋದ.
ಇದ್ದರೂ ನೂರಾರು ತರದ ವೇದನೆ
ಹೇಳಿ ಕೊಟ್ಟನು ತಾಳ್ಮೆಯ ಸಹನೆ
ಮಾಡನೆಂದೂ ಸ್ವಾರ್ಥ ಯೋಚನೆ
ಪದಕೆ ಸಿಗದು ಅವನೊಳ ಭಾವನೆ.
ತೋರಲಿಲ್ಲ ಎಂದೂ ತಳುಕು ಬಳುಕು
ಕಿಂಚಿತ್ತೂ ಇರದು ಒಳಗಿನ ಹುಳುಕು
ನೀಡಿ ನಡೆದರು ನಿತ್ಯ ನಮಗೆ ಬೆಳಕು
ಬಾಳಿ ತೋರಿದರು ಶಿಸ್ತು ಬದ್ಧ ಬದುಕು.
ಹೆತ್ತಮ್ಮನ ಬಾಳ ಪ್ರೀತಿಯ ಜೊತೆಗಾರ
ಕುಟುಂಬಕ್ಕೆ ಇವನೇ ಮೂಲ ಆಧಾರ
ಸದಾ ಹಸನ್ಮುಖಿಯ ಭಾವದ ನಗೆಗಾರ
ಮಕ್ಕಳ ಭವಿಷ್ಯವನ್ನು ಕೆತ್ತುವ ಚಿತ್ರಗಾರ.

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.




















