ಕಲಬುರ್ಗಿ : ಜಿಲ್ಲೆಯ ಕಾಳಗಿ ತಾಲೂಕಿನ ಅಲ್ಲಾಪುರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂಸಿ ಗೆ ನೂತನವಾಗಿ ಅಧ್ಯಕ್ಷರಾಗಿ ಶ್ರೀ ಶಿವಾನಂದ ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಮಮತಾ ಚಂದ್ರಕಾಂತ್ ಇವರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮದ ಮುಖಂಡರ ನೇತೃತ್ವದಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಶಿವಾನಂದ ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಮಾಮತಾ ಚಂದ್ರಕಾಂತ್ ಅ ವಿರೋಧವಾಗಿ ಆಯ್ಕೆ ಆದರು. ಸುನಿಲ್ ಕುಮಾರ್, ಶಿವು ಕುಮಾರ್, ಶಬ್ಬೀರಮಿಯಾ, ಜಗನಾಥ್, ಗುಂಡಮ್ಮ, ಕವಿತಾ, ವೈಜೀನಾಥ್,ಸಿದ್ದಪ್ಪ, ಆಸ್ಮಿಯಾ ಬೇಗಂ, ಶರಣಪ್ಪಾ,ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಶಾಲೆಯ ಮುಖ್ಯ ಗುರುಗಳು ಮಲ್ಲಿಕಾರ್ಜುನ ದೇಗಲ್ಮಡಿ ಮಾತನಾಡಿ ಎಸ್ ಡಿಎಂ ಸಿ ಸದಸ್ಯರು ಶಾಲಾ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಂದ್ರ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಗೀತಾ ಪ್ರೇಮಕುಮಾರ್, ಗ್ರಾಮ ಪಂಚಾಯತ್ ಸದಸ್ಯರು ಸಿದ್ದಯ್ಯ ಸ್ವಾಮಿ, ಗ್ರಾಮದ ಮುಖಂಡರು ಶಿವು ಕುಮಾರ್ ಪಾಟೀಲ್, ರೇವಣಸಿದ್ಧ, ಸದಾನಂದ, ಪರಮೇಶ್ವರ್, ಗಣೇಶ್ ಭೀಮ್ ಶಂಕರ್, ಸ್ವಾಮಿ, ಅತಿಥಿ ಶಿಕ್ಷಕರಾದ ಆನಂದ್ ಅಲ್ಲಾಪುರ ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್




















