ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಕ್ಷ ಪ್ರಶ್ನೆ

ಮಹಾಭಾರತದ ವನವಾಸದ ಸಮಯದಲ್ಲಿ, ಪಾಂಡವರು ಕಾಡಿನಲ್ಲಿ ಸಂಚರಿಸುತ್ತಿದ್ದರು. ಅವರು ಬಹಳ ಸಮಯದಿಂದ ಅಲೆದಾಡುತ್ತಾ ದಣಿದಿದ್ದರು, ಬಾಯಾರಿಕೆಯಿಂದ ಬಳಲುತ್ತಿದ್ದರು. ನೀರಿಗಾಗಿ ಹುಡುಕುತ್ತಾ, ನಕುಲನು ಸಮೀಪದ ಒಂದು ಸರೋವರವನ್ನು ಕಂಡುಕೊಂಡನು. ಅವನಿಗೆ ಬಹಳ ಸಂತೋಷವಾಯಿತು ಮತ್ತು ತಕ್ಷಣವೇ ನೀರು ಕುಡಿಯಲು ಹೋದನು. ಆದರೆ ಅವನು ನೀರನ್ನು ಕುಡಿಯಲು ಪ್ರಯತ್ನಿಸಿದಾಗ, ಒಂದು ಅದೃಶ್ಯ ಶಕ್ತಿ ಅವನನ್ನು ತಡೆಯಿತು.

ಅದೊಂದು ಯಕ್ಷನ ಧ್ವನಿ. ಯಕ್ಷನು ನಕುಲನಿಗೆ, “ನಕುಲ, ಇದು ನನ್ನ ಸರೋವರ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡದೆ ನೀನು ನೀರನ್ನು ಕುಡಿಯುವಂತಿಲ್ಲ” ಎಂದು ಎಚ್ಚರಿಸಿದನು. ಆದರೆ ನಕುಲನು ಆ ಧ್ವನಿಯನ್ನು ಕಡೆಗಣಿಸಿ ನೀರು ಕುಡಿಯಲು ಹೋದನು. ತಕ್ಷಣವೇ, ಅವನು ಮೂರ್ಛೆ ಹೋದನು.

ನಕುಲನು ಹಿಂತಿರುಗದೆ ಇದ್ದಾಗ, ಸಹದೇವನು ಅವನನ್ನು ಹುಡುಕಿಕೊಂಡು ಹೋದನು. ಅವನೂ ಕೂಡ ಅದೇ ಸರೋವರಕ್ಕೆ ಬಂದನು. ಅವನು ತನ್ನ ಸಹೋದರ ನಕುಲನು ಮೂರ್ಛೆ ಹೋಗಿರುವುದನ್ನು ಕಂಡನು. ಅವನು ನೀರು ಕುಡಿಯಲು ಪ್ರಯತ್ನಿಸಿದಾಗ, ಅದೇ ಯಕ್ಷನ ಧ್ವನಿ ಅವನನ್ನೂ ತಡೆಯಿತು. ಸಹದೇವನು ಕೂಡ ಧ್ವನಿಯನ್ನು ನಿರ್ಲಕ್ಷಿಸಿ ಮೂರ್ಛೆ ಹೋದನು.

ಹೀಗೆ, ಅರ್ಜುನ, ಭೀಮ ಮತ್ತು ಧರ್ಮರಾಜ ಯುಧಿಷ್ಠಿರನೂ ಒಬ್ಬರ ನಂತರ ಒಬ್ಬರಂತೆ ಸರೋವರಕ್ಕೆ ಬಂದರು. ಅರ್ಜುನ ಮತ್ತು ಭೀಮ ಇಬ್ಬರೂ ಯಕ್ಷನ ಎಚ್ಚರಿಕೆಯನ್ನು ಕಡೆಗಣಿಸಿ ಮೂರ್ಛೆ ಹೋದರು.

ಕೊನೆಗೆ, ಯುಧಿಷ್ಠಿರನು ಸರೋವರಕ್ಕೆ ಬಂದನು. ತನ್ನ ಎಲ್ಲಾ ಸಹೋದರರು ನೆಲದ ಮೇಲೆ ಮೂರ್ಛೆ ಹೋಗಿರುವುದನ್ನು ನೋಡಿ ಅವನು ಆಶ್ಚರ್ಯಚಕಿತನಾದನು. ಅವನು ನೀರು ಕುಡಿಯಲು ಹೋದಾಗ, ಯಕ್ಷನ ಧ್ವನಿ ಕೇಳಿಸಿತು.

ಓ ಯುಧಿಷ್ಠಿರ, ಈ ಸರೋವರ ನನ್ನದು. ನಿನ್ನ ಸಹೋದರರು ನನ್ನ ಎಚ್ಚರಿಕೆಯನ್ನು ಕಡೆಗಣಿಸಿ ನೀರು ಕುಡಿದು ಮೂರ್ಛೆ ಹೋಗಿದ್ದಾರೆ. ಈಗ ನೀನು ನನ್ನ ಪ್ರಶ್ನೆಗಳಿಗೆ ಉತ್ತರಿಸಿದರೆ ಮಾತ್ರ ನೀರು ಕುಡಿಯಲು ಅನುಮತಿ ನೀಡುತ್ತೇನೆ” ಎಂದು ಯಕ್ಷನು ಹೇಳಿದನು.

ಯುಧಿಷ್ಠಿರನು ಯಕ್ಷನ ಮಾತನ್ನು ಗೌರವಿಸಿ, ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದನು.
ಯಕ್ಷನು ಒಂದರ  ನಂತರ ಮತ್ತೊಂದು ಎಂದಂತೆ ಬುದ್ಧಿವಂತಿಕೆಯಿಂದ ಕೂಡಿದ ಪ್ರಶ್ನೆಗಳನ್ನು ಕೇಳಿದನು.

ಯಕ್ಷ: ಸೂರ್ಯನಿಗೆ ಅದರ ಹೊಳಪನ್ನು ಕೊಡುವುದು ಯಾರು?
ಯುಧಿಷ್ಠಿರ: ಬ್ರಹ್ಮನು.
ಯಕ್ಷ: ಭೂಮಿಗಿಂತ ಭಾರವಾದದ್ದು ಯಾವುದು?
ಯುಧಿಷ್ಠಿರ: ತಾಯಿಯ ಹೃದಯ.
ಯಕ್ಷ: ಆಕಾಶಕ್ಕಿಂತ ಎತ್ತರವಾದದ್ದು ಯಾವುದು?
ಯುಧಿಷ್ಠಿರ: ತಂದೆ.
ಯಕ್ಷ: ವೇಗವಾಗಿ ಚಲಿಸುವುದು ಯಾವುದು?
ಯುಧಿಷ್ಠಿರ: ಮನಸ್ಸು.
ಯಕ್ಷ: ಪ್ರಯಾಣಿಕನ ನಿಜವಾದ ಸ್ನೇಹಿತ ಯಾರು?
ಯುಧಿಷ್ಠಿರ: ಜ್ಞಾನ.
ಯಕ್ಷ: ಎಲ್ಲಕ್ಕಿಂತ ದೊಡ್ಡ ಧರ್ಮ ಯಾವುದು?
ಯುಧಿಷ್ಠಿರ: ದಯೆ ಮತ್ತು ಕರುಣೆ.
ಯಕ್ಷ: ನಿಜವಾದ ಸಂತೋಷ ಎಂದರೇನು?
ಯುಧಿಷ್ಠಿರ:ಒಳ್ಳೆ ನಡತೆ.

ಯುಧಿಷ್ಠಿರನು ಪ್ರತಿಯೊಂದು ಪ್ರಶ್ನೆಗೂ ತರ್ಕಬದ್ಧ ಮತ್ತು ನೈತಿಕ ಉತ್ತರಗಳನ್ನು ನೀಡಿದನು. ಯಕ್ಷನು ಯುಧಿಷ್ಠಿರನ ಬುದ್ಧಿವಂತಿಕೆಯಿಂದ ಬಹಳ ಸಂತೋಷಗೊಂಡನು. ಆಗ, ಯಕ್ಷನು, ನಿನ್ನ ಉತ್ತರಗಳು ನನ್ನನ್ನು ಮೆಚ್ಚಿಸಿವೆ. ನಾನು ನಿನ್ನ ಒಬ್ಬ ಸಹೋದರನನ್ನು ಮತ್ತೆ ಜೀವಂತಗೊಳಿಸುತ್ತೇನೆ. ಯಾರನ್ನು ಆರಿಸುತ್ತೀ? ಎಂದು ಕೇಳಿದನು.

ಯಕ್ಷನ ಪ್ರಶ್ನೆಯಿಂದ ಯುಧಿಷ್ಠಿರನು ಗೊಂದಲಕ್ಕೊಳಗಾದನು. ಭೀಮ ಮತ್ತು ಅರ್ಜುನ ತಮ್ಮ ಶಕ್ತಿ ಮತ್ತು ಪರಾಕ್ರಮದಿಂದಾಗಿ ಬಹಳ ಪ್ರಮುಖರಾಗಿದ್ದರು. ಆದರೆ ಯುಧಿಷ್ಠಿರನು ನಕುಲನನ್ನು ಆರಿಸಿಕೊಂಡನು. ಯಕ್ಷನು ಆಶ್ಚರ್ಯಚಕಿತನಾಗಿ, ನೀನು ಏಕೆ ಭೀಮ ಅಥವಾ ಅರ್ಜುನರನ್ನು ಆರಿಸಿಕೊಳ್ಳಲಿಲ್ಲ? ಎಂದು ಕೇಳಿದನು.
 
ಯುಧಿಷ್ಠಿರನು, ಯಾಕೆಂದರೆ, ನಮ್ಮ ತಂದೆಗೆ ಇಬ್ಬರು ಪತ್ನಿಯರು – ಕುಂತಿ ಮತ್ತು ಮಾದ್ರಿ. ಕುಂತಿಯ ಪುತ್ರನಾದ ನಾನು ಬದುಕಿದ್ದೇನೆ. ಆದ್ದರಿಂದ, ಮಾದ್ರಿಯ ಪುತ್ರನಾದ ಒಬ್ಬ ಸಹೋದರನು ಬದುಕುವುದು ನ್ಯಾಯ ಎಂದು ಹೇಳಿದನು. ಈ ಉತ್ತರವು ಯಕ್ಷನನ್ನು ಇನ್ನಷ್ಟು ಮೆಚ್ಚಿಸಿತು. ಯಕ್ಷನು ನಿಜವಾಗಿಯೂ ಧರ್ಮರಾಜನಾದ ಯಮ ಎಂದು ಬಹಿರಂಗಪಡಿಸಿದನು. ಯುಧಿಷ್ಠಿರನ ಪ್ರಾಮಾಣಿಕತೆ, ನೈತಿಕತೆ ಮತ್ತು ಧರ್ಮನಿಷ್ಠೆಯಿಂದ ಪ್ರಭಾವಿತನಾದ ಯಮನು ಅವನ ಎಲ್ಲ ಸಹೋದರರನ್ನು ಜೀವಂತಗೊಳಿಸಿದನು.

  • ಸಂದೀಪ್ ಜೋಷಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!