
ಕರ್ನಾಟಕದ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಿವಂಗತ ದೇವರಾಜು ಅರಸುರವರ ನಂತರ ರಾಜ್ಯದ ಮುಖ್ಯಮಂತ್ರಿಯಾಗಿ 2792 ದಿನಗಳ ಜನಸೇವೆಯನ್ನು ಪೂರ್ಣಗೊಳಿಸಿ ಕರ್ನಾಟಕದ ಸುದೀರ್ಘ ಅವಧಿಯ ಜನಪ್ರಿಯ ಮುಖ್ಯಮಂತ್ರಿಗಳಾಗಿ ಶ್ರೀ ಸಿದ್ದರಾಮಯ್ಯನವರು ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಆಗಿದ್ದಾರೆ.
2013ರಲ್ಲಿ ಅನ್ನಭಾಗ್ಯ ಜೊತೆ ವಿವಿಧ ಯೋಜನೆ ಜಾರಿ!
ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ!
ರೈತರಿಗೆ ನೆರವಾಗುವುದಕ್ಕಾಗಿ ಕೃಷಿ ಭಾಗ್ಯ ಯೋಜನೆ!
ವಿದ್ಯಾಸಿರಿ ಯೋಜನೆಯಲ್ಲಿ ವಾರ್ಷಿಕ 1500 ರೂಪಾಯಿ.
2023ರಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯಕ್ಕೆ ಬಂದ್ಮೇಲೆ ಪ್ರಮುಖವಾಗಿ ಅಹಿಂದ ಸಮುದಾಯವನ್ನು ಒಟ್ಟಾಗಿಸಿದ್ದಾರೆ.
ಅವರೇ ಕರ್ನಾಟಕದ ಅನ್ನರಾಮಯ್ಯ, ಗ್ಯಾರಂಟಿ ಯೋಜನೆಯನ್ನು ಅನುಷ್ಠಾನ ಮಾಡಿದ ಗ್ಯಾರಂಟಿ ರಾಮಯ್ಯ ಭಾಗ್ಯ ರಾಮಯ್ಯ ಹಾಲುಮತದ ನಿಷ್ಕಳಂಕ ಜನರ ಮನಸ್ಸು ಗೆದ್ದ ಅಮೃತರಾಮಯ್ಯ ಕನ್ನಡ ರಾಮಯ್ಯ ಕರುನಾಡ ದೊರೆ. ಅನುಭವ ಸಂಪನ್ನ ಹೋರಾಟದ ಛಲ ಸಮರ್ಥ ನಾಯಕತ್ವ ಅಪರೂಪದ ವಾಕ್ಚಾತುರ್ಯ ಅವರೇ ಟಗರು ಸಿದ್ದರಾಮಯ್ಯನವರು. 17ನೇ ಬಜೆಟ್ ಮಂಡನೆ ಮಾಡಲು ಹೊರಟಿರುವ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣುತ್ತಿರುವ ಸಿದ್ದರಾಮಯ್ಯನವರು ಬಡವರು ಶೋಷಿತರಿಗೆ ಸಾಮಾಜಿಕ ನ್ಯಾಯ ಸಮಾನತೆ ಅಭಿವೃದ್ಧಿಯ ಕನಸು ಕಾಣುವ ದೂರ ದೃಷ್ಟಿ ಹೊಂದಿರುವ ನಾಯಕ, ಸಂವಿಧಾನದ ಆಶಯ ಹಾಗೂ ತತ್ವಗಳ ಪರಿಪಾಲಕ ರೈತಗಾಗಿ ಕೃಷಿಭಾಗ್ಯವನ್ನು ನೀಡಿದ ರೈತರಾಮಯ್ಯ. ಇಂದು ರಾಜ್ಯ ಇತಿಹಾಸದಲ್ಲಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ ಏಕೈಕ ನಾಯಕರು ಅದು ಶ್ರೀ ಮಾನ್ಯ ಸಿದ್ದರಾಮಯ್ಯನವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಕರ್ನಾಟಕ ದೇಶದೆಲ್ಲೆಡೆ ಮನೆ ಮಾತಾಗಿರುವ ಅಹಿಂದ ವರ್ಗಗಳ ಜನಜನಿತ ನಾಯಕರಾದ ಸಿದ್ದರಾಮಯ್ಯನವರ ಜನಸೇವೆ ನಾಡಿಗೆ ಮತ್ತಷ್ಟು ಸಿಗಲಿ ಆಶಿಸುತ್ತಾ ಕೊರಟಗೆರೆ ಪತ್ರಕರ್ತರ ಧ್ವನಿ ಬಳಗದಿಂದ ಅಭಿನಂದನೆಗಳನ್ನು ಸಲ್ಲಿಸಿದರು.
ವರದಿಗಾರರು : ಪ್ರಸನ್ನಕುಮಾರ್. ಎಸ್., ಕೊರಟಗೆರೆ




















