ಓದಬೇಕಿದೆ ಹಂಬಲದಿ
ಅರಿವಿನ ಅರಮನೆಗೆ ಹೋಗಲು
ಬಿಗುವಿನ ವಾತಾವರಣ ನಿವಾರಿಸಲು
ಹಮ್ಮು ಬಿಮ್ಮು ಕಳಚಲು.
ಓದಬೇಕಿದೆ ಹಂಬಲದಿ
ಜಗದ ಜಂಜಡ ತಿಳಿಯಲು
ಬದುಕಿನ ಭಾರ ಹೊರಲು
ಜಗದ ನಿಯಮ ಗುರುತಿಸಲು.
ಓದಬೇಕಿದೆ ಹಂಬಲದಿ
ಕೆದಕಿದ ಮನವ ಹಸನುಗೊಳಿಸಲು
ಬಿಸಾಡಿದವರ ಬೆನ್ನತ್ತಿ ಬರಲು
ಮಾರು ದೂರ ಸರಿದವರು ಅಪ್ಪಿಕೊಳ್ಳಲು
ಓದ ಬೇಕಿದೆ ಹಂಬಲದಿ
ಕಳವಳವ ಬದಿಗಿರಿಸಲು
ಕಳಕಳಿಯ ಮನವಿ ಮಾಡಲು
ಕಳೆಗಟ್ಟಿ ನಿಲ್ಲಲು.
ಓದಬೇಕಿದೆ ಹಂಬಲದಿ
ಜಾಗೃತ ಚರ್ಚೆ ನಡೆಸಲು
ವ್ಯಾಧಿ ಗುಣ ಪಡಿಸಬಹುದು
ಸುಸಂಸ್ಕೃತ ಸಮಾಜ ನಿರ್ಮಿಸಲು.
ಓದ ಬೇಕಿದೆ ಹಂಬಲದಿ
ಮನದ ಗೋಡೆ ಕೆಡವಲು
ಮುನಿದವರು ಜನಜನಿತವಾಗಲು
ಜರಿದ ಜನಕೆ ಪಾಠ ಕಲಿಸಲು
ಓದ ಬೇಕಿದೆ ಹಂಬಲದಿ
ನಿರ್ಲಕ್ಷಿಸಿದವರ ಗಮನ ಸೆಳೆಯಲು
ನಿರ್ವಹಿಸುವ ಕಾರ್ಯ ಸಫಲವಾಗಲು
ನಿರಕ್ಷರನು ಸುರಕ್ಷತೆಗೆ ಒಯ್ಯಲು.
ಓದಬೇಕಿದೆ ಹಂಬಲದಿ
ಆತ್ಮ ತೃಪ್ತಿಪಡಿಸಲು
ಆತ್ಮ ವಿಶ್ವಾಸ ಪಡೆಯಲು
ಪರಮಾತ್ಮನ ಸಾಕ್ಷಾತ್ಕರಿಸಲು
ಓದಬೇಕಿದೆ ಹಂಬಲದಿ
ಗುರಿಯ ಕಡೆಗೆ ಪಯಣಿಸಲು
ಪ್ರಯತ್ನದ ಫಲವ ಬಯಸಲು
ಸಿರಿ ಗರಿಯ ಭಾರ ಇಳಿಸಲು.
ಓದ ಬೇಕಿದೆ ಹಂಬಲದಿ
ತರಾವರಿ ಮೋಹ ಸರಿಸಲು
ತಾರೆಗಳಂತೆ ಮಿನುಗಲು
ಸಾಧನೆಯ ಶಿಖರ ಏರಲು
ಓದ ಬೇಕಿದೆ ಹಂಬಲದಿ
ಸಮಾಜ ಮಾನ್ಯ ಮಾಡಲು
ಸಮಾನ ಅವಕಾಶ ಪಡೆಯಲು
ಬಿಗುಮಾನ ಬಿಟ್ಟು ಇರಲು.
ನವ್ಯ ದಾರಿ ಹುಡುಕಲು
ಆತ್ಮ ವಿಮರ್ಶೆ ಮಾಡಲು
ಸರಿಯಾದ ಉತ್ತರ ಕಂಡುಕೊಳ್ಳಲು
ಓದ ಬೇಕಿದೆ ಹಂಬಲದಿ
ಬಾ ನೆತ್ತರದ ಕನಸು ಕಾಣಲು
ಕನಸು ನನಸಾಗಿಸಲು
ಆರ್ಥಿಕತೆ ಚೇತರಿಸಲು
ಓದ ಬೇಕಿದೆ ಹಂಬಲದಿ
ಸಮರ್ಥ ನಾಯಕತ್ವ ಪಡೆಯಲು
ನಾನಾರ್ಥ ತಿಳಿಯಲು
ಒಂದೆಂದು ಸಾಬೀತು ಪಡಿಸಲು.
ಓದ ಬೇಕಿದೆಹಂಬಲದಿ
ಸಂಧಾನದ ರುಚಿಯ ಅನುಭವಿಸಲು
ವ್ಯವಧಾನದ ಹಿರಿಮೆ ತಿಳಿಸಲು
ವ್ಯವಹಾರದ ಬಗೆಯ ಅರಿಯಲು
ಓದ ಬೇಕಿದೆ ಹಂಬಲದಿ
ಸಫಲತೆಯ ಮಹಿಮೆ ಅರಿಯಲು
ವಿಫಲತೆಗೆ ಕಾರಣ ಹುಡುಕಲು
ಆಪತ್ತಿಗೆ ಪ್ರತ್ಯುತ್ತರಿಸಲು
ಓದಬೇಕಿದೆ ಹಂಬಲದಿ
ಮನೋಬಲದಿ ಝೇಂಕರಿಸಲು
ಅವಕಾಶ ಪಡೆಯಲು
ಸನ್ಮಿತಿಯ ಅನುಕರಿಸಲು.
- ರೇಷ್ಮಾ ಕಂದಕೂರ ,ಶಿಕ್ಷಕಿ
ಸಿಂಧನೂರು.




















