(ದಿ.1-2-2026 ರಂದು ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದ ನಿಮಿತ್ತ ಸ್ವರಚಿತ ಕವನ ಸಮರ್ಪಣೆ)
‘ಅವಿಭಕ್ತ ಕುಟುಂಬ ಗ್ರಂಥ’ ನಾಯಕರು
ರೋಣ ತಾಲೂಕ ಮುಗಳಿ ಗ್ರಾಮದವರು
ಶ್ರೀರಂಗಪ್ಪ-ಶಿವಮ್ಮರ ಕುಲದೀಪಕರು
ಕ್ರಿಯಾಶೀಲ ಚಲನಾತ್ಮಕ ವ್ಯಕ್ತಿತ್ವವುಳ್ಳವರು
ಕೃಷಿ ಮನೆತನದಲಿ ಜನಿಸಿಹರು
ರಾಮಣ್ಣ-ಸುಮಿತ್ರಾ ದಂಪತಿಗಳವರು
ಅವಿಭಕ್ತ ಕುಟುಂಬದ ಸಾರಥಿಯಾಗಿಹರು
ಗದಗ ನಗರದ ನಿವಾಸಿಯಿವರು
ತುಂಬು ಕುಟುಂಬಪ್ರಿಯ ರಾಮಣ್ಣನವರು
‘ಸರ್ವೇಜನಾ: ಸುಖಿನೋ ಭವಂತು’
ತತ್ವಾದರ್ಶ ಸತ್ಪ್ರೇರಣಾ ಪರಿಪಾಲಕರು
‘ವಸು ದೖವ ಕುಟುಂಬಕಂ’ ರೂವಾರಿಯೆನಿಸಿಹರು
ಸಾಯಿಬಾಬಾ ಸತ್ಸಂಗ ಸಮಿತಿ ನಿರ್ದೇಶಕರು
ಕಾಶಿ ವಿಶ್ವನಾಥ ಮಂದಿರದ ಸದ್ಭಕ್ತರು
ಸ್ವಾಮಿವಿವೇಕಾನಂದ ಸಮಿತಿ ಉಪಾಧ್ಯಕ್ಷರು
ದಕ್ಷ ಆಡಳಿತಗಾರ ಚತುರ ಸಂಘಟಕರು
ಗಡಿಯಾರದಂತೆ ಕ್ರಿಯಾಶೀಲ ಕಾಯಕ ಯೋಗಿ ವರ್ಯರು
‘ರಾಜೇಶ್ವರಿ’ ‘ಓಂಸಾಯಿ’ ಕಂದಮ್ಮರ ಹೆತ್ತವರು
ಶರಣು-ಮಹಾದೇವಿಯರ ಆಶ್ರಯದಾತರು
ಬಂಧುಬಾಂಧವರ ಪ್ರೀತಿವಾತ್ಸಲ್ಯ ಪೋಷಕರು
ಸಕಲರಿಗೆ ಲೇಸನೆ ಬಯಸುವ ದಾರಿದೀಪಕರು
‘ಅವಿಭಕ್ತ ಕುಟುಂಬ ಗ್ರಂಥ’ ನೇತಾರರು
ಅಭಿನಂದನಾ ಸಮಾರಂಭ ನಿರ್ಮಾತೃಗಳು
ಬಡವರ ಬಾಳಿನ ಸೇವಾದುರಂಧರರು
ಸಾಮಾಜಿಕ ಸಾಂಸ್ಕ್ರತಿಕ ಧಾರ್ಮಿಕ ಸೇವಾಪ್ರಿಯರು
ಎಲೆಮರೆಯ ಹೂವಿನಂತೆ ನಿಸ್ವಾರ್ಥ ಸ್ವಭಾವದವರು
ರಾಮಣ್ಣನವರ ಸೇವಾನಿವೃತ್ತಿ ಭವಿಷ್ಯತ್ತು
ಸುಖ ಶಾಂತಿ ಸಂತೃಪ್ತಿ ಸಮೃದ್ಧಮಯವಾಗಿರಲೆಂದು
ಆಯುರಾರೋಗ್ಯ ಸಕಲ ಸೌಭಾಗ್ಯಗಳನು ಭಗವಂತನು ನಿರಂತರ ದಯಪಾಲಿಸುತಲಿರಲೆಂದು
ಮನದುಂಬಿ ಸರ್ವರೂ ಶುಭ ಹಾರೖಸುವೆವು.

- ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು
ಗದಗ.




















