ಕೊರಟಗೆರೆಯಲ್ಲಿ ಫೆಬ್ರವರಿ 23 ರಂದು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಂ.ಜಿ ಪ್ಯಾಲೇಸ್ ನಲ್ಲಿ ಆಯೋಜನೆ ಮಾಡುವುದಾಗಿ ತಾಲೂಕು ಆಡಳಿತ ಅಧಿಕಾರಿ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಕೊರಟಗೆರೆ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್ ಕೆ ರವರು 14 ವರ್ಷದ ಬಳಿಕ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಸಮ್ಮೇಳನದ ಅಧ್ಯಕ್ಷರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕಾರ್ಮಿಕ ಇಲಾಖೆಯ ನಿವೃತ್ತ ಅಧಿಕಾರಿ ತುಂಬಾ ರಾಮಯ್ಯನವರು ಆಯ್ಕೆಯಾಗಿದ್ದಾರೆ ಇವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಇವರು ಸಾಹಿತಿ ಲೇಖಕ ಹಾಗೂ ದಲಿತ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಗೌರವ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಕನ್ನಡದ ರಥ ವಿವಿಧ ಕಲಾ ತಂಡಗಳೊಂದಿಗೆ ತಾಲೂಕು ಕಚೇರಿಯಿಂದ ಬೆಳಗ್ಗೆ 8 ರಿಂದ ಪ್ರಾರಂಭಿಸಿ ಪ್ಯಾಲೇಸ್ ವರೆಗೂ ಮೆರವಣಿಗೆ ಯೊಂದಿಗೆ ಸಾಗಿ ಕನ್ನಡದ ಜಾತ್ರೆ ಕನ್ನಡ ತಾಯಿಗೆ ನಮನ ಸಲ್ಲಿಸುವ ಮುಖಾಂತರ ಸಮ್ಮೇಳನ ವಿಜೃಂಭಣೆಯಿಂದ ಯಶಸ್ವಿ ಮಾಡುವುದಾಗಿ ಹೇಳಿದರು ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನ ವನ್ನು ಸಚಿವರಿಗೂ ಸ್ವಾಮೀಜಿಯವರು ಸಿದ್ದರಬೆಟ್ಟದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಕುಂಚಟಿಗ ಮಹಾ ಸಂಸ್ಥಾನದ ಶ್ರೀಮಕದ ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರವರು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಭಾಗವಹಿಸುತ್ತಾರೆ ಎಂದು ಪೂರ್ವ ಭಾವಿ ಸಭೆಯಲ್ಲಿ ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ್ ಕೆ. ರಾಮ್ ಪ್ರಸಾದ್ ಗ್ರೇಡ್ 2, ಕಸಾಪ ಅಧ್ಯಕ್ಷ ಈರಣ್ಣ ಹಾಗೂ ಆಡಳಿತ ವರ್ಗದ ಬಸವರಾಜು ರಘು ಮತ್ತು ಹಿರಿಯ ಮುಖಂಡರು ಪತ್ರಕರ್ತರು ಭಾಗವಹಿಸಿದ್ದರು.
ವರದಿ : ಪ್ರಸನ್ನಕುಮಾರ್ ಎಸ್. ಕೊರಟಗೆರೆ




















