ಐತಿಹಾಸಿಕ ತಾಳಿಕೋಟಿ ಪಟ್ಟಣದಲ್ಲಿ ಎರಡನೇ ವರ್ಷದ ಶ್ರೀರಾಮನವಮಿ ಉತ್ಸವಕ್ಕೆ ಇಂದು ಭವ್ಯವಾಗಿ ಚಾಲನೆ ನೀಡಲಾಯಿತು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಜನ್ಮದಿನದ ಅಂಗವಾಗಿ ಶ್ರೀ ರಾಮನವಮಿ ಉತ್ಸವ ಸಮಿತಿ (ರಿ.) ತಾಳಿಕೋಟೆ ವತಿಯಿಂದ ಈ ಮಹೋತ್ಸವವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
ದಿನಾಂಕ 30-03-2026, ಸೋಮವಾರ ಸಂಜೆ 4:00 ಗಂಟೆಗೆ ಶ್ರೀ ರಾಣಾ ಪ್ರತಾಪ್ ಸಿಂಹಜೀ ವೃತ್ತದಿಂದ ಭವ್ಯ ಶೋಭಾಯಾತ್ರೆ ಹಾಗೂ ಧರ್ಮಸಭೆ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಅಧ್ಯಕ್ಷರಾದ ದಶರಥ್ ಸಿಂಗ್ ಮನಗೂಳಿ, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಆರ್.ಎಸ್. ಪಾಟೀಲ್ ಕುಚ್ಬಾಳ, ಅಮಿತ್ ಸಿಂಗ್ ಮನಗೂಳಿ, ಪಿಂಟು ಹಜೇರಿ, ವಿಠ್ಠಲ್ ಸಿಂಗ್ ಹಜೇರಿ, ರತನ್ ಸಿಂಗ್ ಹಜೇರಿ, ರಾಜು ಹಜೇರಿ, ತಿಪ್ಪಣ್ಣ ಸಜ್ಜನ್, ರಮೇಶ್ ಹಜೇರಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದು ಉತ್ಸವಕ್ಕೆ ಬೆಂಬಲ ಸೂಚಿಸಿದರು.
ಶ್ರೀರಾಮನವಮಿ ಉತ್ಸವದ ಅಂಗವಾಗಿ ನಡೆಯಲಿರುವ ಈ ಶೋಭಾಯಾತ್ರೆ ತಾಳಿಕೋಟಿ ಪಟ್ಟಣದ ಭಕ್ತಿ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಲಿದೆ.
ವರದಿ: ನಜೀರ್ ಅಹ್ಮದ್ ಚೋರಗಸ್ತಿ




















