
ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯ ಕಾಲದ 16ನೇ ಶತಮಾನದ ಅಪರೂಪದ ಶಾಸನ ಪತ್ತೆಯಾಗಿದೆ. ಗ್ರಾಮದ ಪಶ್ಚಿಮ ಭಾಗದಲ್ಲಿರುವ ನಾರಿಹಳ್ಳ ದಂಡೆಯ ಬಳಿ ಈ ಅಪ್ರಕಟಿತ ಶಾಸನ ಕಂಡುಬಂದಿದ್ದು, ಇತಿಹಾಸಕ್ತರಲ್ಲಿ ಕುತೂಹಲ ಮೂಡಿಸಿದೆ.
ಕೊಪ್ಪಳ ತಾಲೂಕಿನ ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ. ಅಂಜಿನಯ್ಯ ಅವರು ಶಾಸನವನ್ನು ಪತ್ತೆಹಚ್ಚಿ, ಪ್ರಾಥಮಿಕವಾಗಿ ಓದಿ ಅರ್ಥೈಸಿದ್ದಾರೆ. ಕನ್ನಡ ಲಿಪಿಯಲ್ಲಿ ಇರುವ ಈ ಶಾಸನವು ಶ್ರೀಕೃಷ್ಣದೇವರಾಯ ಅವರ ಆಡಳಿತಕಾಲಕ್ಕೆ ಸೇರಿದ್ದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಶಾಸನದಲ್ಲಿ ಹಂಪಾದೇವನಹಳ್ಳಿಯನ್ನು “ ಕೃಷ್ಣರಾಯಪುರ ” ಎಂದು ಮರುನಾಮಕರಣ ಮಾಡಿ ದಾನ ನೀಡಿರುವ ಉಲ್ಲೇಖ ಕಂಡು ಬಂದಿದೆ. ಶಾಸನದ ಮೇಲ್ಬಾಗದಲ್ಲಿ ಸೂರ್ಯ-ಚಂದ್ರ ಚಿಹ್ನೆಗಳು ಹಾಗೂ ಕೆಳಭಾಗದಲ್ಲಿ ವಿಷ್ಣುವಿನ ವಾಮನ ಅವತಾರದ ಚಿತ್ರ ಕೆತ್ತಲಾಗಿದ್ದು, ಇದು ವೈಶಿಷ್ಟ್ಯತೆಯನ್ನು ತೋರಿಸುತ್ತದೆ. ಕಾಲದ ಶಿಲ್ಪಕಲೆಯ
ಸುಮಾರು 5 ಅಡಿ ಎತ್ತರದ ಗ್ರಾನೈಟ್ ಶಾಸನವು ವಿಜಯನಗರ ಯುಗದ ಮಹತ್ವದ ಪುರಾವೆಯಾಗಿದ್ದು, ಇತಿಹಾಸದ ದೃಷ್ಟಿಯಿಂದ ಅಮೂಲ್ಯವಾದ ದಾಖಲೆ ಎಂದು ಪರಿಗಣಿಸಲಾಗಿದೆ. ಶಾಸನ ಪತ್ತೆಗೆ ಗ್ರಾಮದ ಯುವಕರಾದ ಕರಿಬಸವ, ಉಮೇಶ್ ಮತ್ತು ಪ್ರವೀಣ್ ಸಹಕರಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















