
ಗದಗ ಜಿಲ್ಲೆಯ ರೋಣ ತಾಲೂಕು ಕುರಹಟ್ಟಿ ಸಮೀಪದ ಮುಝೆರಪ್ಪ ಮಾದರ್ 24 ಗುಂಟೆ ಹೊಲದಲ್ಲಿ ಅಕ್ರಮ ಮಣ್ಣು ಮಾಫಿಯಾ ಮಾಡುತ್ತಿದ್ದರು ಸರಕಾರದ ಪರವಾನಿಗೆ ಇಲ್ಲದೆ ರಾಜಾ ರೋಷವಾಗಿ ಜೆ ಸಿ ಬಿ ಮುಖಾಂತರ ಟ್ರ್ಯಾಕ್ಟರಗಳಲ್ಲಿ ಮಣ್ಣು ಸಾಗಿಸುತ್ತಾರೆ ಇದಕ್ಕೆ ಸಂಬಂಧಪಟ್ಟ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಫಕೀರಪ್ಪ ದು. ಮಾದರ್ ಗ್ರಾಮ ಘಟಕ ಡಿ ಎಸ್ ಎಸ್ ಸಂಚಾಲಕರು ಮುದೇನಗುಡಿ ಇವರು ಸರ್ಕಾರಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸುತ್ತಮುತ್ತ ಗ್ರಾಮಗಳಲ್ಲಿಯೂ ಮಣ್ಣು ಮಾಫಿಯಾ ದಂಧೆ ನಡಿತಾಯಿದೆ ಹಾಗಾಗಿ ಶೀಘ್ರದಲ್ಲಿ ಮಣ್ಣಿನ ಹೊಲದ ಮಾಲಿಕನ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.




















