ಆಲದ ಮರದ ಚಿಗುರೆಲೆಗಳು ನಡುವಿನಲಿ
ಪಂಚ ದಳದ ಶ್ವೇತ ಪುಷ್ಪಗಳು ವೃತ್ತದಲಿ
ಕಡುಗೆಂಪಿನ ಪುಟ್ಟ ಹೂಗಳು ಜೊತೆಯಲಿ
ಬಾದಾಮಿ ಎಸಳುಗಳು ಹೊರಾಂಗಣದಲಿ
ಸುಲಲಿತ ಚಿತ್ತಾರವಾಗಿದೆ ಉದಯರಾಗದಲಿ
ಕಾವ್ಯವಾಗಿ ಮೂಡಿದೆ ಕವಿಮನದ ಕಲ್ಪನೆಯಲಿ
ಬರುತಲಿದೆ ಸುಮನಗಳ ಮನದಂಗಳದಲಿ
ತುಂಬಲು ಚೈತನ್ಯವ ನಿತ್ಯದ ಅಭಿಮಾನಿಗಳಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















