ಭೂತಾಯ ಮಡಿಲಲಿ ಹರಡಿದ್ದ ಪಾರಿಜಾತವು
ತ್ರಿವಳಿ ಕೆಂಪಿನೆಲೆಗಳ ನಡುವೆ ಬಿಳಿ ಗುಲಾಬಿ ಹೂವು
ನೆತ್ತಿಯಲಿ ತಿಳಿಗುಲಾಬಿ ರಂಗಿನ ಪುಟ್ಟ ಪುಷ್ಪವು
ಜೊತೆಯಲಿ ಸೇರಿವೆ ಮೊಗ್ಗಿನಾ ದಾಸವಾಳವು
ಒಟ್ಟು ಸೇರಿಸಲು ಕೈಚಳಕದಿ ಅರಳಿತು ಚಿತ್ತಾರವು
ಭಾವನಾ ಲಹರಿಯಲಿ ಮೂಡಿರುವುದೊಂದು ಕಾವ್ಯವು
ಸುಮನಗಳಲ್ಲಿಗೆ ಬರಲು ಆಗಿದೆ ಶುಭ ಮುಂಜಾವು
ಪರಸ್ಪರ ಸಂತಸದಿ ಸವಿಯೋಣ ಅನುದಿನವು
- ಲಲಿತಾ ಕೆ ಆಚಾರ್, ಬೆಂಗಳೂರು




















