ಇಲಕಲ್ಲ : ಬಣಗಾರ ಸಮಾಜ ಪರಮಾತ್ಮನ ಕೃಪೆಯಿಂದ ಉದ್ಭವಗೊಂಡ ವೀರಶೈವ ಲಿಂಗಾಯತದ ಒಳಪoಗಡ ಸಮಾಜ. ಹೃದಯ ವೈಶಾಲ್ಯತೆಯುಳ್ಳ ಬಡ ಸಮಾಜ, ಇದನ್ನು ಒಂದುಗೂಡಿಸಿ ಮುನ್ನೆಡೆಯಬೇಕಾದದ್ದು ಪ್ರತಿ ಬಣಗಾರ ಸಮಾಜ ಬಾಂಧವರ ಜವಾಬ್ದಾರಿ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಕಿವಿಗೊಡದೆ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು ಮುನ್ನುಗ್ಗುವ ಗುರುತರ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದ್ದು ಆ ದಿಶೆಯಲ್ಲಿ ನಾವು ಕಾರ್ಯ ಪ್ರವೃತ್ತರಾಗಿ ಎಲ್ಲರನ್ನೂ ಒಂದೂಗೂಡಿಸಿ ಬಣಗಾರ ಸಮಾಜವನ್ನು ಬಲಿಷ್ಠ ಸಮಾಜವನ್ನಾಗಿ ಬಲಪಡಿಸುತ್ತೇವೆ ಎಂದು ಇಳಕಲ್ಲದ ಬಣಗಾರ ಸಮಾಜದ ಮುಖಂಡರಾದ ಮಹಾಂತೇಶ್ ಸಮಾಳದರವರು ಇಳಕಲ್ಲದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಡಾ ಸದಾಶಿವ ಕನಕೇರಿ, ರಮೇಶ ಇಟಗಿ, ಈರಣ್ಣ ಹೇರಲಗಿ,ಮುತ್ತು ಸಮಾಳದ, ಶಂಕರ ಧನಶೆಟ್ಟಿ, ವಿಜಯಕುಮಾರ್ ಕಂಪ್ಲಿ, ಬಸವರಾಜ್ ಬಂಡೆಪ್ಪನವರ, ಶರಣಪ್ಪ ಮಸ್ಕಿ ಹಾಗೂ ಸಮಾಜದ ಕುಲಗುರು ಶಂಕರದಾಶಿಮಯ್ಯನವರ ಜನ್ಮಸ್ಥಳ ಕಂದಗಲ್ಲ ಗ್ರಾಮದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ವೀರೇಶ ಶಿಂಪಿ ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















