ಬಳ್ಳಾರಿ / ಕಂಪ್ಲಿ : ಗ್ರಾಮೀಣ ಮತ್ತು ನಗರ ಪ್ರದೇಶಗಳ ನಿರುದ್ಯೋಗಿ ಯುವಕ-ಯುವತಿಯರು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆಯ ಅರಿವು ಮೂಡಿಸಿ, ಅವರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅಗತ್ಯವಿರುವ ಮಾರ್ಗದರ್ಶನ ಮತ್ತು ಧೈರ್ಯವನ್ನು ನೀಡುವ ತರಬೇತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಕಾರ್ಯಕ್ರಮವಾಗಿದೆ.
ಆರ್ಥಿಕ ಸಂಕಷ್ಟಕ್ಕೆ ದುಡಿಮೆಯೇ ಮದ್ದು ಎನ್ನುವುದನ್ನು ಮಹಿಳೆಯರು ಅರಿತುಕೊಳ್ಳಬೇಕು ಎಂದು ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ರಾಘವೇಂದ್ರ ಹೇಳಿದರು. ಅವರು ಎಮ್ಮಿಗನೂರು ಸಾವಿತ್ರಿಬಾಯಿಫುಲೆ ಜ್ಞಾನ ವಿಕಾಸ ಕೇಂದ್ರದ ಸ್ವ- ಉದ್ಯೋಗ ಪ್ರೇರಣಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಲಿಗೆ ಯಂತ್ರ ಬಳಸಿಕೊಂಡು ಕೌಶಲದಿಂದ ನಾನಾ ವಸ್ತಗಳನ್ನು ತಯಾರಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮುಂದಾಗಬೇಕು ಎಂದರು.
ಗ್ರಾಮದ 50 ಜನ ಮಹಿಳೆಯರಿಗೆ ಬಟ್ಟೆ ಚೀಲ, ಬಟ್ಟೆ ಹೂ ತಯಾರಿಸುವ ಕೌಶಲವನ್ನು ತರಬೇತುದಾರರಾದ ಅರಳಿ ಸುಧಾ, ರಾಮುಲಮ್ಮ ಕಲಿಸಿಕೊಟ್ಟರು. ಗ್ರಾಮದ ಪ್ರಮುಖ ಶಾಶ್ವತ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಂದ್ರದ ಅಧ್ಯಕ್ಷೆ ಬನಶಂಕರಿ, ಸಮನ್ವಯ ಅಧಿಕಾರಿ ಆರ್.ಎನ್.ಮಂಜುಳಾ, ಮೇಲ್ವಿಚಾರಕ ಈಶ್ವರ್, ಪ್ರಮುಖರಾದ ರಾಘವೇಂದ್ರ, ರಾಮಪ್ಪ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















