ತಂಗಾಳಿಯಲಿ ತೂಗುತಲಿ ಬಳುಕುತಲಿತ್ತು ತೆನೆಗಳು
ಪಕ್ಕದಲಿ ಓಲಾಡುತಲಿತ್ತು ಕೆಂಪು ದಾಸವಾಳಗಳು
ಚಿತ್ತಾರ ಮಾಡೆನುತಲಿತ್ತು ಸೃಜನಶೀಲ ಚಿಂತನೆಗಳು
ಆರಂಭಿಸೀಗಲೆ ಎನುತಲಿತ್ತು ಕ್ರಿಯಾಶೀಲಭಾವಗಳು
ಆಣತಿಯಂತೆ ಜೋಡಿಸಲು ನಿತ್ಯದ ಕಟ್ಟೆಯಲಿ
ಮೂಡಿಯೆಬಿಟ್ಟಿತು ಲಘು ಕಾವ್ಯದ ಜೊತೆಯಲಿ
ಬರುತಲಿದೆ ಸುಮನಗಳಿಗೀಗ ಭಾವ ಲಹರಿಯಲಿ
ಆಸ್ವಾದಿಸುತ ಸಾಗುವ ನಾವೆಲ್ಲರೀಗ ಹುಮ್ಮಸ್ಸಿನಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















