ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಶನಿವಾರ ಬಲಿಜ ಸಮಾಜದ ಬಾಂಧವರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ಭಕ್ತಿ-ಭಾವ ಮತ್ತು ಸಡಗರದಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಐತಿಹಾಸಿಕ ಕೋಟೆ ಭಾಗದ ತುಂಗಭದ್ರಾ ನದಿಯ ದಂಡೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿಂದ ಶ್ರೀ ಯೋಗಿ ನಾರಾಯಣ ಯತೇಂದ್ರರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ನದಿಯ ದಂಡೆಯಲ್ಲಿ ಪೂಜೆ ನೆರವೇರಿದ ಬಳಿಕ, ಶ್ರೀಗಳ ಭಾವಚಿತ್ರದೊಂದಿಗೆ ಪವಿತ್ರ ಗಂಗಸ್ಥಳವನ್ನು ಭಕ್ತಿಪೂರ್ವಕವಾಗಿ ಹೊತ್ತು ಮೆರವಣಿಗೆ ನಡೆಸಲಾಯಿತು.
ಈ ಭವ್ಯ ಮೆರವಣಿಗೆಯು ಕಂಪ್ಲಿಯ ಮುಖ್ಯ ಬಜಾರ್ (ಮೇನ್ ಬಜಾರ್) ರಸ್ತೆಯ ಮೂಲಕ ಸಾಗಿ ಮಾರುತಿನಗರದ ಬಲಿಜ ಭವನದಲ್ಲಿ ಸಂಪನ್ನಗೊಂಡಿದೆ.
ಮೆರವಣಿಗೆ ಯುದ್ದಕ್ಕೂ ಜಯಘೋಷಗಳು ಮೊಳಗಿದವು. ಬಲಿಜ ಸಮಾಜದ ಪ್ರಮುಖರು, ಮಹಿಳೆಯರು ಹಾಗೂ ಯುವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಅಂತಿಮವಾಗಿ ಮಾರುತಿನಗರದ ಶಿಬ್ರದಿನ್ನಿಯಲ್ಲಿರುವ ಬಲಿಜ ಭವನದ ಆವರಣಕ್ಕೆ ಗಂಗಾಸ್ಥಳವನ್ನು ತರಲಾಯಿತು. ಅಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ ಹಾಗೂ ಪೂಜಾ ಕಾರ್ಯಕ್ರಮಗಳೊಂದಿಗೆ ಇಡೀ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್




















