
ಬಳ್ಳಾರಿ / ಕುರುಗೋಡು : ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೆ-ಸ್ಯಾಪ್ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ‘ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ – 2026″ ಮತ್ತು ರಾಜ್ಯ ಮಟ್ಟದ ಮಾಸ್ಕಾಟ್ (ಲೋಗೋ) ಸ್ಪರ್ಧೆ ಕುರಿತು ವಿಶೇಷ ಜಾಗೃತಿ ಕಾರ್ಯತ್ರ ಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಬಿ. ಶಾಂತಲಾ ಉದ್ಘಾಟಿಸಿದರು.
ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಐ.ಸಿ.ಟಿ.ಸಿ. ಆಪ್ತ ಸಮಾಲೋಚಕರಾದ ಕರಿಬಸವ ಎನ್. ಅವರು ಮಾತನಾಡಿ, ಹೆಚ್.ಎ.ವಿ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ತಮ್ಮ ಹೆಚ್.ಐ.ವಿ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ ಬೇಕು. ಸರ್ಕಾರಿ ಆಸ್ಪತ್ರೆಗಳ ಐಸಿಟಿಸಿ, ಎಆರ್ಟಿ ಮತ್ತು ಎಸ್ಬಿಐ ಕೇಂದ್ರಗಳಲ್ಲಿ ಸಂಪೂರ್ಣ ಗೌಪ್ಯತೆಯೊಂದಿಗೆ ಉಚಿತ ತಪಾಸಣೆ ಮತ್ತು ಆಪ್ತ ಸಮಾಲೋಚನೆ ಲಭ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಹೆಚ್.ಐ.ಎ/ಏಡ್ಸ್ ಕುರಿತು ಸುದೀರ್ಘ ಮಾಹಿತಿ ನೀಡಿದರು.
ಉಚಿತ ಸಹಾಯವಾಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 1097 ಸಂಖ್ಯೆಗೆ ಅಥವಾ www.breakfreeindia.org
ಕರ್ನಾಟಕ ರಾಜ್ಯ ಎಡ್ಸ್ ನಿಯಂತ್ರಣ ಸೊಸೈಟಿ ವತಿಯಿಂದ ಆಯೋಜಿಸಲಾಗಿರುವ ಮಾಸ್ಕಾಟ್ ಸ್ಪರ್ಧೆಯ ವಿವರಗಳನ್ನು ಇದೇ ಸಂದರ್ಭದಲ್ಲಿ ತಿಳಿಸಿಕೊಡಲಾಯಿತು. ವಿಷಯ & ಮೌಲ್ಯಗಳು: ಭರ ವಸೆ, ಜಾಗೃತಿ ಮತ್ತು ಹೆಚ್.ಐ.ವಿ ತಡೆಗೆ ಟ್ಟುವಿಕೆಯನ್ನು ಬಿಂಬಿಸುವ ಕಾಲ್ಪನಿಕ, ನೈಜ ಆಥವಾ ಫ್ಯಾಂಟಿಸಿ ಮಾದರಿಯ ಸ್ವಂತಿಕೆಯುಳ್ಳ ವಿನ್ಯಾಸಗಳು.
ವಿಜೇತರಿಗೆ 25,000 ನಗದು ಬಹು
ಮಾನ ನೀಡಲಾಗುವುದು (ಅಂತಿಮ ಆಯ್ಕೆ KSAPS ತೀರ್ಮಾನಕ್ಕೆ ಒಳಪಟ್ಟಿ ರುತ್ತದೆ. ನಿಮ್ಮ ವಿನ್ಯಾಸದ ಮೇಲೆ ಕಡ್ಡಾಯವಾಗಿ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಉತ್ತಮ ಗುಣಮಟ್ಟದ ಸ್ಕ್ಯಾನ್ ಪ್ರತಿಯನ್ನು ksapsmascot@gmail.com
ವಿಳಾಸಕ್ಕೆ ಇ-ಮೇಲ್ ಮಾಡಬೇಕು. ಆಗಸ್ಟ್ 31 ಕೊನೆಯ ದಿನವಾಗಿದೆ ಎಂದು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಉಪನ್ಯಾಸಕ ವೀರಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕ ವಿಶ್ವನಾಥ, ಪ್ರಥಮ ದರ್ಜೆ ಸಹಾಯಕ ಗಣೇಶ್, ಸ್ನೇಹಾ ಕ್ಲಿನಿಕ್ ಆಪ್ತ ಸಮಾಲೋಚಕ ಮಹಬೂಬ್ ಭಾಷಾ, ಸಿಬ್ಬಂದಿಗಳಾದ ಗೋವರ್ಧನ್, ಗಾದಿಲಿಂ ಗಪ್ಪ ಹಾಗೂ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















