ಕರ್ನಾಟಕದ 18ನೇ ವಿಧಾನಸಭಾ ಅಧ್ಯಕ್ಷರಾದ ಶ್ರೀ ಜಿ.ಎಸ್. ಪಾಟೀಲರು ತವರಿಗೆ ಆಗಮಿಸಿದರಿಂದ ರೋಣ ಮತಕ್ಷೇತ್ರದ ಅಭಿಮಾನಿಗಳು ಹಾಗೂ ತಾಯಂದಿರು ಆರತಿ ಎತ್ತಿ ಅದ್ದೂರಿಯಾಗಿ ಗೌರವದಿಂದ ಬರಮಾಡಿಕೊಂಡರು.
ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜಿ. ಎಸ್. ಪಾಟೀಲ್ ರವರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಳೆಸಿ ಜೊತೆಗೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ.
ಈ ಸಂದರ್ಭದಲ್ಲಿ ನೂತನ ವಿಧಾನಸಭಾ ಸ್ಪೀಕರ್ ಶ್ರೀ ಗುರುಪಾದಗೌಡ ಸಂಗನಗೌಡ ಪಾಟೀಲ್ ಮಾತನಾಡಿ ರೋಣ ತಾಲೂಕಿನಲ್ಲಿ ನನ್ನ ಮತ ಕ್ಷೇತ್ರದ ಅಭಿಮಾನಿಗಳು ಪಕ್ಷ, ಜಾತಿ ಪಂಥ ಅಂತ ಭೇದ ಭಾವ ಇಲ್ಲದೆ ಎಲ್ಲಾ ಅಭಿಮಾನಿಗಳು ಇಲ್ಲಿ ಇಷ್ಟು ಗೌರವಿಸಿದ್ದಕ್ಕೆ ನಾನು ಹಾಗೂ ನಮ್ಮ ಕುಟುಂಬದವರು ನಮ್ಮ ರೋಣ ಮತಕ್ಷೇತ್ರದ ಜನರಿಗೆ ಎಂದೆಂದಿಗೂ ನಾವು ಚಿರಋಣಿಯಾಗಿರುತ್ತೇವೆ ನನ್ನ ರೋಣ ಜನತೆ ಇವತ್ತು ದೇವರಿಗೆ ಉರುಳು ಸೇವೆ ಮಾಡಿ, ದೇವರಿಗೆ ಹರಕೆ ಹೊತ್ತು ವಿಧಾನಸಭಾದವರೆಗೆ ಪಾದಯಾತ್ರೆ ಸಲ್ಲಿಸಿದ್ದಾರೆ ಇದು ಜನರು ಕೊಟ್ಟ ಭಾಗ್ಯವಾಗಿದೆ ಇನ್ನು ಮುಂದೆ ರೋಣ ತಾಲೂಕಿನ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದೇ ನನ್ನ ಗುರಿ ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಿಥುನ್ ಜಿ ಪಾಟೀಲ್, ವೀರಣ್ಣ ಶೆಟ್ಟರ್, ಅಭಿಷೇಕ್ ನವಲಗುಂದ, ಅಪ್ಪು ಗಿರೆಡ್ಡಿ ,ಸಂಗು ನವಲಗುಂದ, ಬಸವರಾಜ್ ನವಲಗುಂದ, ಸಂಜಯ್ ದೊಡ್ಮನೆ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಯುವಕ ಮಿತ್ರರು ಪಾಲ್ಗೊಂಡಿದ್ದರು.
ವರದಿ ಶರಣಪ್ಪಗೌಡ ಸಕ್ಕರಗೌಡರ




















