ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶರಣರ ಧಾರ್ಮಿಕ ಚಿಂತನೆ, ಸಾಮಾಜಿಕ ಜಾಗೃತಿಗೆ ರುದ್ರಮುನಿಯವರ ಕೊಡುಗೆ ಅಪಾರ

ಬಸವಕಲ್ಯಾಣ: ೧೨ನೇ ಶತಮಾನದಲ್ಲಿ ಶಿವಶರಣರಲ್ಲಿ ಒಬ್ಬರಾದ ಹಾವಿನ ಹಾಳ ಕಲ್ಲಯ್ಯನಿಗೆ ಗವಿಮಠದ ಪಟ್ಟದೇವರಾದ ಗುರು ರುದ್ರಮುನಿ ಶಿವಾಚಾರ್ಯರು ಜಗದ್ಗುರು ರೇವಣಸಿದ್ದೇಶ್ವರ ಅಪ್ಪಣೆಯಂತೆ ಶಿವ ದೀಕ್ಷೆಯನ್ನು ನೀಡಿದರು.
ವಚನ ಪಿತಾಮಹ ಹಾಗೂ ಫ.ಗು. ಹಳಕಟ್ಟಿ ಅವರು ಶಿವಾನುಭವ ಲೇಖನದಲ್ಲಿ ಪ್ರಸ್ತಾಪಿಸಿರುವಂತೆ ಜಗಜ್ಯೋತಿ ಬಸವೇಶ್ವರರು ಒಂದು ಬಲಿಷ್ಠ ರಾಜ್ಯದಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿದ ನಂತರ ಅನೇಕ ಶಿವಶರಣರು ಕಲ್ಯಾಣಕ್ಕೆ ಆಗಮಿಸತೊಡಗಿದರು ಬಳಿಕ ಎಲ್ಲರೂ ಒಟ್ಟಾಗಿ ಸೇರಿದ ನಂತರ ಶಿವಾನುಭವ ಮಂಟಪವು ಸ್ಥಾಪಿತವಾಯಿತು ಅಲ್ಲೇ ಶಿವಶರಣರು ಸೇರಿ ಧಾರ್ಮಿಕ ತತ್ವಗಳನ್ನು ಚರ್ಚಿಸುತ್ತಾ ವೀರಶೈವ ಧರ್ಮದಲ್ಲಿ ಒಂದು ಸುವ್ಯವಸ್ಥೆಯನ್ನು ಮಾಡಲಾಯಿತು ಎಂದು ಉಲ್ಲೇಖಿಸಲಾಗಿದೆ. ಶಿವಶರಣರಿಗೂ ಬಿಜ್ಜಳನಿಗೂ ವಿರೋಧ ಉಂಟಾದಾಗ ಶಿವಶರಣರು ಕಲ್ಯಾಣ ಪಟ್ಟಣವನ್ನು ಬಿಟ್ಟು ಉಳವಿ, ಶ್ರೀಶೈಲ ಮೊದಲಾದ ಕಡೆಗೆ ತೆರಳಿದರು ಈ ಸ್ಥಿತಿಯನ್ನು ಶ್ರೀ ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಶರಣ ಕಿನ್ನರಿ ಬ್ರಹ್ಮಯ್ಯ, ಮುಂತಾದವರು ಕಲ್ಯಾಣದಲ್ಲಿಯೇ ಉಳಿಯುವ ಪ್ರಸಂಗ ಬಂದಿತು ಇಂತಹ ಸನ್ನಿವೇಶದಲ್ಲಿ ಗುರು ರುದ್ರಮುನಿಯು ಶಿವಶರಣರಿಗೆ ಸಹಾಯಕನಾಗಿ ನಿಂತು ಸಮಾಜದ ರಕ್ಷಣೆಯನ್ನು ಮಾಡಿದರು ಎಂದು ಪವಿತ್ರ ಶ್ರಾವಣ ಮಾಸದ ಅಂಗವಾಗಿ ಗವಿಮಠದಲ್ಲಿ ಆಯೋಜಿಸಿದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂದೇಶ ಕುರಿತು ವಿಶೇಷ ಉಪನ್ಯಾಸಮಾಲೆ ಕಾರ್ಯಕ್ರಮದಲ್ಲಿ ಪ್ರೋ. ಸೂರ್ಯಕಾಂತ ಶೀಲವಂತ ಹೇಳಿದರು.
ಗವಿಮಠದ ಪರಿಸರದಲ್ಲಿ ಹೆಚ್ಚಾಗಿ ಕಣಗಿಲು ಎಂದರೆ ಕೆಂಪು ಕಣಗಿಲ ಹೂವಿನ ಗಿಡಗಳು ಇದ್ದದ್ದು ಚಂಗಣಿಗಿಲ ಮಂಟಪವೆಂಬ ಸ್ಥಾನವನ್ನು ರಚಿಸಿ ಗುರು ರುದ್ರಮುನಿ ಅವರು ಏಕಾಂತದಲ್ಲಿದ್ದುಕೊಂಡು ಶಿವ ಧ್ಯಾನ ಮಾಡುತ್ತಿದ್ದರು ಅನೇಕ ಸಾಹಸ ಕಾರ್ಯಗಳು ಮಾಡಿರುವುದನ್ನು ವರ್ಣಿಸಲಾಗದು ಇದರಿಂದ ಅವರು ಇತಿಹಾಸದಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದ್ದರೆಂದು ಹೇಳಬೇಕಾಗುತ್ತದೆ ಎಂದು ಸಾನಿಧ್ಯ ವಹಿಸಿ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಶ್ರೀ ಲೋಕೇಶ್ ಸ್ವಾಮಿ, ನಿವೃತ್ತ ಶಿಕ್ಷಕರಾದ ಶ್ರೀ ರಾಮಶೆಟ್ಟಿ ಬಿರಾದಾರ, ಸಂಜುಕುಮಾರ ಜಾಧವ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀ ಬಸವಂತಪ್ಪಾ ಲವಾರೆ ಸ್ವಾಗತಿಸಿದರು, ಅಭಿಷೇಕ ರಾಮಣ್ಣನವರ ನಿರೂಪಿಸಿದರು.
ಶ್ರೀಮತಿ ರೇಣುಕಾ ಶಿವಶಂಕರ ರಾಮಣ್ಣನವರ ಪ್ರಾರ್ಥನೆ ಗೀತೆ ಹಾಡಿದರು, ಹಣಮಂತವಾಡಿಯ ಮಹಾಲಕ್ಷ್ಮಿ ಕೋಲಾಟ ಹಾಗೂ ಭಜನಾ ಸಂಘದಿಂದ ಭಜನೆ ನಡೆಯಿತು.
ಭಕ್ತರೆಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಎ.ಜಿ ಪಾಟೀಲ,ಪ್ರೋ.ರುದ್ರೇಶ್ವರ ಗೋರ್ಟಾ,ರಾಕೇಶ ಪುರವಂತ, ಗೋವಿಂದ ರೆಡ್ಡಿ ಕೋತಂಪಲ್ಲಿ, ಬಾಬುರಾವ ಚಳಕಾಪುರೆ, ಜಯರಾಜ ಕಮ್ಮಾ, ಗೋವಿಂದ ಅಯ್ಯಣ್ಣೋರ್, ಭೀಮರಾಯಿ ಅಯ್ಯಣ್ಣೋರ್, ಪ್ರಭು ಗಾಧಾ, ಶ್ರೀಮತಿ ನರಸಮ್ಮಾ ತಮ್ಮಣಿ, ಶ್ರೀಮತಿ ಸರಸ್ವತಿ ಬೆಂಬಳೆ, ಶ್ರೀಮತಿ ಸವಿತಾ ರಮೇಶ ಸ್ವಾಮಿ, ಶ್ರೀಮತಿ ವಿಮಲಾಬಾಯಿ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!