ವೀರ ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ತರುಣ ಸೇವಾ ಸಂಘ (ರಿ.) ಮಹಾಲಿಂಗಪುರ ರಾಜ್ಯಾಧ್ಯಕ್ಷರಾದ ತಿಪ್ಪಣ್ಣ ಕಲ್ಲೋಳಪ್ಪ ಬಂಡಿವಡ್ಡರ, ರಾಜ್ಯ ಸಮಿತಿ ಸದಸ್ಯರಾದ ಅರ್ಜುನ ರಾಮಪ್ಪ ಬಂಡಿವಡ್ಡರ, ಯಂಕಪ್ಪ ಗುರಪ್ಪ ಬಂಡಿವಡ್ಡರ, ರಬಕವಿ ಬನಹಟ್ಟಿ ತಾಲೂಕಿನ ಕಾರ್ಯದರ್ಶಿಗಳಾದ ರಾಜು ರಾಮಪ್ಪ ಬಂಡಿವಡ್ಡರ, ಮಹಾಲಿಂಗಪುರ ಘಟಕದ ಅಧ್ಯಕ್ಷರಾದ ರವಿ ಭಗವಂತ ವಡ್ಡರ ಇವರೆಲ್ಲರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಿ ನೇಮಕಾತಿ ಆದೇಶ ಪ್ರತಿಯನ್ನು ಕೊಡಲಾಯಿತು.
ರಬಕವಿ ಬನಹಟ್ಟಿ ತಾಲೂಕಿನ ಕಾನೂನು ಸಲಹೆಗಾರರಾಗಿ ರಾಮು ಬಾಬು ಪಾತ್ರೋಟ ವಕೀಲರು ಹಾಗೂ ಮಹಾಲಿಂಗಪುರ ಘಟಕದ ಉಪಾಧ್ಯಕ್ಷರನ್ನಾಗಿ ಮಾರುತಿ ಯಲ್ಲಪ್ಪ ಬಂಡಿವಡ್ಡರ, ಮಹಾಲಿಂಗಪುರ ಘಟಕದ ಕಾರ್ಯದರ್ಶಿಯನ್ನಾಗಿ ಶಶಿಕಾಂತ ರಾಜು ಪಾತ್ರೋಟ ಅವರನ್ನು ನೇಮಕ ಮಾಡಲಾಯಿತು.
ಮಹಾಲಿಂಗಪುರ ಘಟಕದ ಸದಸ್ಯರನ್ನಾಗಿ ರಾಮು ಯಲ್ಲಪ್ಪ ಬಂಡಿವಡ್ಡರ , ಪ್ರಭು ಲಕ್ಷ್ಮಣ ಬಂಡಿವಡ್ಡರ , ಸುನಿಲ ಲಕ್ಷ್ಮಣ ಬಂಡಿ ವಡ್ಡರ , ಪರಶುರಾಮ ಮಾನಿಂಗಪ್ಪ ಬಂಡಿವಡ್ಡರ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಇನ್ನಿತರರು ಇದ್ದರು.




















