ಬಾಗಲಕೋಟೆ/ ಮುಧೋಳ : ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಯೋಸ್ಪಾಟ್ ಇಂಡಿಯಾ ಲಿಮಿಟೆಡ್ ವತಿಯಿಂದ 2025- 26 ನೇ ಸಾಲಿನಲ್ಲಿ ತೇರ್ಗಡೆಯಾದ 13 ರೈತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಬಾಗಲಕೋಟೆಯ ಟೆರಿಟರಿ ಮ್ಯಾನೇಜರ್ ಮಲ್ಲಿಕಾರ್ಜುನ ಗುಗ್ಗರಿ ಮಾತನಾಡಿ ವಿದ್ಯಾರ್ಥಿಗಳಿಗೆ ಗೌರವಿಸಿ ತಲಾ ಮೂರು ಸಾವಿರ ರೂಪಾಯಿಗಳನ್ನು ನೀಡಿದರು.
ಪರಮಾನಂದ ಆಗ್ರೋ ಟ್ರೇಡರ್ಸ್ ಹಾಗೂ ಕೃಷಿ ಉತ್ಪನ್ನ ಮಾರಾಟಗಾರರು ಕಾರ್ಯಕ್ರಮಕ್ಕೆ ಆಶ್ರಯ ನೀಡಿದರು.
ಬಯೋಸ್ಪಾಟ್ ಇಂಡಿಯಾ ಲಿಮಿಟೆಡ್ ದ ಮುಖ್ಯಸ್ಥರಾದ ಮಹೇಶ್ ಉದ್ದಿ. ವಿಶ್ವನಾಥ್ ಬ್ಯಾಕೋಡ ಸಂತೋಷ ಹಳ್ಳೂರ. ಪ್ರಗತಿಪರ ರೈತರಾದ ಆರ್.ಎಸ್.ಸುಣಗಾರ. ಯಮನಪ್ಪ ಗುಂಡಕಲ್. ಗೋಪಾಲ ಸರವಗೋಳ.ಲಕ್ಷ್ಮಣ ಡಂಗಿ. ರಾಮಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















