ಮೈಸೂರು ಜಲ ದರ್ಶಿನಿಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಭೀಮ ರಾವ್ ವೇದಿಕೆ ವತಿಯಿಂದ ನೂತನ ಪದಾಧಿಕಾರಿಗಳ ನೇಮಕ ಮತ್ತು ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗೂ ಸಾಧಕರಿಗೆ ಭೀಮರತ್ನ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಡಾಕ್ಟರ್ ಅಬ್ದುಲ್ ಶುಕುರ್ ಗುರೂಜಿ ಸಂಘಟನೆಗಳು ಹಲವು ಹುಟ್ಟುತ್ತವೆ ಅವನ್ನು ಪ್ರಾಮಾಣಿಕವಾಗಿ ಉಳಿಸಬೇಕು ಮತ್ತು ಎಲ್ಲಿ ಅನ್ಯಾಯವಾಗುತ್ತೆ ನಮ್ಮ ಸಂಘಟನೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು ಹಾಗೂ ಸಂಘಟನೆ ಒಗ್ಗೂಡಿಸಲು ಎಲ್ಲಾ ಸದಸ್ಯರು ಶ್ರಮಪಡಬೇಕು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕು ಎಂದು ನೂತನ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಲಹೆ ನೀಡಿದರು ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಭೀಮರಾವ್ ವೇದಿಕೆ ವತಿಯಿಂದ ಡಾಕ್ಟರ್ ಅಬ್ದುಲ್ ಶುಕುರ್ ಗುರುಗಳಿಗೆ ಸನ್ಮಾನಿಸಿ ಗೌರವಿಸಿದರು ಮತ್ತು ಹಲವು ಗಣ್ಯರು ತಮ್ಮ ತಮ್ಮ ಅನಿಸಿಕೆ ಮಾತು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎ. ಆರ್. ಮಂಜುನಾಥ್ ಮಾತನಾಡಿದರು ಮತ್ತು ಮೀನಾಕ್ಷಿ ಡಾಕ್ಟರ್ ಪೂರ್ಣಿಮಾ ಭಾಗ್ಯಲಕ್ಷ್ಮಿ ದೇವಪ್ಪ ನಾಯಕ್ ರಾಹುಲ್ ವಿಶ್ವನಾಥ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















