ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಯ್ಯಾಳ ಲಿಂಗೇಶ್ವರ ಜಾತ್ರೆಗೆ ಅಡ್ಡಿಯಾದ ಸೇತುವೆ: ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಯಾದಗಿರಿ ಮತಕ್ಷೇತ್ರ ವ್ಯಾಪ್ತಿಗೆ ಬರುವ ಹಯ್ಯಾಳ.ಬಿ, ಮದರಕಲ್ ಮಾರ್ಗ ಮದ್ಯದಲ್ಲಿನ ನೂತನ ಬ್ಯಾರೇಜ್ ಕಂ ಸೇತುವೆ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ರಸ್ತೆ ಕೊಚ್ಚಿಕೊಂಡು ಹೋಗಿದ್ದು ತಾತ್ಕಲಿಕ ರಸ್ತೆ ಇಲ್ಲದೆ ಹಯ್ಯಾಳ ಲಿಂಗೇಶ್ವರ ಜಾತ್ರೆಗೆ ಬಂದಂತ ಭಕ್ತರು ರಸ್ತೆ ಇಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹಳ್ಳದ ನೀರಿನಲ್ಲಿ ರಸ್ತೆ ಇರದ ಕಾರಣ ರೈತರ ನಾಯಿಗಳು, ಕುರಿ ಮರಿಗಳು ಸೇರಿದಂತೆ ಜಾನುವಾರುಗಳು ಕೊಚ್ಚಿಕೊಂಡು ಹೋಗಿದ್ದು ಇದಕ್ಕೆ ಸಂಬಂಧ ಪಟ್ಟ ಗುತ್ತಿಗೆ ಸಂಸ್ಥೆ ಕೆ.ಕೆ.ಬಿ ಕಾಮಗಾರಿ ಹಾಗೂ ಇಲಾಖೆ ಎಇಇ, ಸೆಕ್ಷನ್ ಆಫೀಸರ್ ಕಾರಣಕರ್ತರಾಗಿದ್ದು ಕೂಡಲೆ ಇವರ ಮೇಲೆ ಪ್ರಕರಣ ದಾಖಲಿಸಿ, ಸಂಬಂಧಪಟ್ಟ ಗುತ್ತಿಗೆದಾರರನ ಹೆಸರು ಕಪ್ಪುಪಟ್ಟಿಗೆ ಸೇರಿಸಬೇಕೆಂದು ರೈತ ಸಂಘದ ಮಾನಶಯ್ಯ ನಾಯಕ್ ಪರೇಟಿ ಐಕೂರ ಇವರು ವಿಷಾದ ವ್ಯಕ್ತಪಡಿಸಿದರು.
ಕನಿಷ್ಠ ಸುರಕ್ಷೆ ಇಲ್ಲದ ಕಾಮಗಾರಿ ಇದಾಗಿದ್ದು ಅತ್ಯಂತ ಕೆಟ್ಟ ಕಾಮಗಾರಿ ಯಾಗಿದ್ದು ತರಾತುರಿಯಲ್ಲಿ ಇನ್ನು ಗಟ್ಟಿ ಮುಟ್ಟಾಗಿದ್ದ ಸೇತುವೆಯನ್ನು ಕೆಡವಿ ಸೇತುವೆ ನಿರ್ಮಾಣ ಮಾಡಲು ಹೊರಟಿರುವ ಅಧಿಕಾರಿಗಳು ಸೇತುವೆ ಪಕ್ಕದಲ್ಲಿ ಇರುವ ಜಮೀನುಗಳು ಹಾಳಾಗುತ್ತಿದೆ ಶಾಶ್ವತವಾಗಿ ಕೃಷಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ರೈತರಿಗೆ ಪರಿಹಾರ ನೀಡಬೇಕು , ಯೋಜನೆಯಿಂದ ಶಾಶ್ವತ ಹಾನಿ ಆಗಬಹುದಾದ ರೈತರ ಭೂಮಿಯನ್ನು ಜಿಲ್ಲಾಡಳಿತ ಭೂ ಸ್ವಾಧೀನ ಪಡಿಸಿಕೊಂಡು ರೈತರಿಗೆ ತೊಂದರೆಯಾಗದಂತೆ ಸೂಕ್ತ ಪರಿಹಾರ ನೀಡಬೇಕು , ಸ್ಥಳೀಯ ಶಾಸಕರು ಇತ್ತಕಡೆ ಗಮನ ಹರಿಸಬೇಕು ಎಂದು ರೈತರು ತಮ್ಮ ನೋವುಗಳು ಹಂಚಿಕೊಂಡರು.
ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕುವ ರೈತರೊಂದಿಗೆ ಅನಿರ್ಧಿಷ್ಟ ಸತ್ಯಾಗ್ರಹ ನಡೆಯಲಿದೆ ಎಂದು ವಾಲ್ಮೀಕಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಳ್ಳೂರು.ಎಂ, ರಾಷ್ಟೀಯ ಕಿಸಾನ್ ಸಂಘಟನೆ ಯಾದಗಿರ ಇವರು ಆಗ್ರಹಿಸಿದರು.

ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ