ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಟಿಬೆಟಿಯನ್ ಯುವಕನ ಕೊಲೆ:ಎಸ್ ಪಿ ಭೇಟಿ ಪರಿಶೀಲನೆ

ಮುಂಡಗೋಡ:ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ್ -4 ರಲ್ಲಿನ ಮನೆ ನಂಬರ್ 45 ರಲ್ಲಿ ಯಾವುದೋ ಹಳೆಯ ದ್ವೇಷಕ್ಕೆ ಮಾಜಿ ಸೈನಿಕ Gonpo thinley choedak ಪ್ರಾಯ 50 ವರ್ಷ ಹಾಗೂ jamyanga Dakpa tengin yeshi ಪ್ರಾಯ 35 ವರ್ಷ ಇವರುಗಳ ನಡುವೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗಳಾಗಿ, ಇದರಲ್ಲಿ jamyanga Dakpa tengin yeshi ಪ್ರಾಯ (35 ವರ್ಷ ಸಾಕಿನ್ ಟಿಬೆಟಿಯನ್ ಕ್ಯಾಂಪ್ ನಂಬರ್ 4 ಮನೆ ನಂಬರ್ 43) ಎನ್ನುವ ಯುವಕ ಮೃತ ಪಟ್ಟಿದ್ದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕಲಂ 302 ಐಪಿಸಿ ದಾಖಲಾಗಿದ್ದು,ಘಟನೆ ನಡೆದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಟಿಬೆಟಿಯನ್ ಕ್ಯಾಂಪ್ ನಲ್ಲಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಶೇಷ ಜಿಲ್ಲಾ ವಿಭಾಗದ ಠಾಣೆಗೆ ಭೇಟಿ ನೀಡಿದ ಎಸ್ ಪಿ ಸಿಬ್ಬಂದಿಗಳಿಂದ ಮಾಹಿತಿ ಪಡೆದು ತೆರಳಿದರು.

ಹೆಚ್ಚುತ್ತಿರುವ ಅಪರಾಧಗಳ ಸಂಖ್ಯೆ…!
ಮುಂಡಗೋಡ ನಗರದಿಂದ ಸುಮಾರು 5 km ದೂರವಿರುವ ಟಿಬೆಟಿಯನ್ ಕ್ಯಾಂಪ್,ಅಸಂಖ್ಯಾತ ಭೌದ್ಧ ಭಿಕ್ಕುಗಳ ಆಶ್ರಯ ತಾಣವಾಗಿದೆ.ಸಾಧು ಜೀವನ ನಡೆಸುತ್ತಿರುವ ಬಿಕ್ಕುಗಳ ಮಧ್ಯೆಯೇ ಕೆಲವು ಸಿವಿಲಿಯನ್ ಗಳಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು,ಟಿಬೆಟಿಯನ್ ಕ್ಯಾಂಪ್ ನಲ್ಲಿ ಗಾಂಜಾ ಹಾವಳಿ ಜಾಸ್ತಿಯಾಗಿದೆ,ಈ ವರ್ಷದಲ್ಲೇ ಸುಮಾರು 5 ರೈಡ್ ಗಳು ಆಗಿದ್ದು ಸಾವಿರಾರು ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ