ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಂಗಳೂರು ಬಂದ್ ಗೆ ಕರೆ ಕೊಟ್ಟ ರಾಜ್ಯಮಟ್ಟದ ಸಾರಥಿ ಸೇನಾ ಸಂಘ

ಬೆಂಗಳೂರು:ಕರ್ನಾಟಕ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನ ಚಾಲನೆ ಮಾಡುವ ಚಾಲಕರಿಗೆ ತುಂಬಲಾರದ ನಷ್ಟವಾಗಿದೆ ಕೂಡಲೆ ಸರ್ಕಾರ ಖಾಸಗಿ ವಾಹನ ಚಾಲಕರಿಗೆ ಆದ ಪರಿಹಾರದ ನಷ್ಟವನ್ನು ತುಂಬಿಕೊಡಬೇಕು ಅದೇ ರೀತಿಯಾಗಿ ದಿನಾಂಕ 11/9/2023 ರಂದು ಸೋಮವಾರ ದಿವಸ 32 ಸಂಘಟನೆಗಳ ಒಕ್ಕೂಟದೊಂದಿಗೆ ಬೆಂಗಳೂರು ಬಂದ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ನಗರ ಸಾರಥಿ ಸೇನೆಯ (ರಿ.) ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ ಟಿ ಎಂ ಕೇಶವ ಅವರು ಕರೆ ಕೊಟ್ಟಿದ್ದಾರೆ ಹೋರಾಟದ ಪ್ರಮುಖ ಬೇಡಿಕೆಗಳು.1.ಅನಧಿಕೃತ ಟ್ಯಾಕ್ಸಿ ಬಂದಾಗಬೇಕು.
2.ಲೈಫ್ ಟೈಮ್ ಟ್ಯಾಕ್ಸ್ ಪಡೆಯಬೇಕು.
3.ಆನ್ಲೈನ್/ಆಫ್ ಲೈನ್ ಕಾರುಗಳಿಗೆ ಒನ್ ಸಿಟಿ ಒನ್ ರೇಟ್ ಮಾಡಬೇಕು
4.ಖಾಸಗಿ ಬಸ್ಸುಗಳನ್ನು ಶಕ್ತಿ ಯೋಜನೆಗೆ ಸೇರ್ಪಡೆಗೊಳಿಸಬೇಕು
5.ಗೂಡ್ಸ್ ವಾಹನಗಳಿಗೆ ಆನ್ಲೈನ್ ಸಂಸ್ಥೆಗಳಿಂದ ಆಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು.
6.ಶಕ್ತಿ ಯೋಜನೆಯಿಂದ ವಾಣಿಜ್ಯ ಬಳಕೆಯ ಚಾಲಕರಿಗೆ ಆಗುತ್ತಿರುವ ನಷ್ಟವನ್ನು ತುಂಬಿಕೊಡಬೇಕು
7.ಓಲಾ ಉಬರ್ ಪೋರ್ಟರ್ ಸಂಸ್ಥೆಗಳಿಂದ ಚಾಲಕರ ಬ್ಲಾಕ್ ಲಿಸ್ಟ್ ತೆರವುಗೊಳಿಸಬೇಕು
8.ಖಾಸಗಿ ಶಾಲಾ ವಾಹನಗಳಿಗೆ ಪರ್ಮಿಷನ್ ನೀಡಬೇಕು.
ಎಲ್ಲಾ ನಿರ್ದಿಷ್ಟ ರೂಪರೇಶೆಗಳನ್ನೂ ಹಾಕಿಕೊಂಡೆ ಬೆಂಗಳೂರು ಬಂದ್ ಗೆ ಕರೆ ಕೊಡಲಾಗಿದೆ ಎಂದು ಬೆಂಗಳೂರು ಸಾರಥಿ ಸೇನೆ (ರಿ.) ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ ಟಿ ಎಂ ಕೇಶವ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ