ಯಾದಗಿರಿ:370ನೇ ವಿಧಿಯನ್ನು ರದ್ದು ಮಾಡಿದ ಬಿಜೆಪಿ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದ ಸುಪ್ರೀಮ್ ಕೋರ್ಟ್ ತೀರ್ಪಿಗೆ ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಅವರು ಸ್ವಾಗತಿಸಿದರು ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ಗೃಹ ಸಚಿವರಾದ ಅಮಿತ್ ಷಾರವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರವನ್ನು ಭಾರತದಲ್ಲಿ ಸಂಪೂರ್ಣವಾಗಿ ವಿಲೀನ ಮಾಡಿದ ಬಿಜೆಪಿ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿರುವುದು,ನಮ್ಮ ಸರ್ಕಾರದ ನಿಲುವು ದೇಶದ ಹಿತದ ಪರವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಪುಷ್ಠೀಕರಿಸಿದೆ ಎಂದು ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಹರೀಶ್ ವ್ಯಕ್ತಪಡಿಸಿದರು.
ಕಾಂಗ್ರೇಸ್ ಪಕ್ಷದವರು ಅಧಿಕಾರದಲ್ಲಿರುವಾಗಲೇಲ್ಲಾ,ಪಾಕಿಸ್ಥಾನದವರ ಮೇಲೆ ಎಲ್ಲಿಲ್ಲದ ಪ್ರೀತಿ ತೋರಿ,ಜಮ್ಮು ಕಾಶ್ಮಿರವನ್ನು ಪಾಕಿಸ್ಥಾನಕ್ಕೆ ಬಿಟ್ಟುಕೊಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ನೇಹರು ಅವರ ಕಾಲದಲ್ಲಿ ತಾತ್ಕಾಲಿಕವಾಗಿ 370 ನೇ ವಿಧಿ ಜಾರಿಗೆ ತರಲಾಗಿತ್ತು,ಆದರೆ ಅಧಿಕಾರದ ದುರಾಸೆಯಿಂದ ಒಂದು ಕೋಮಿನ ಓಲೈಕೆಗೆ ಕಾಂಗ್ರೇಸ್ ಪಕ್ಷದ ಎಲ್ಲಾ ನಾಯಕರುಗಳು ಈ ವಿಧಿಯನ್ನು ಖಾಯಂ ಮಾಡಲು ಹರಸಾಹಸ ಪಟ್ಟಿದ್ದರು ಆದರೆ ಈ ಎಲ್ಲಾ ಗೊಂದಲಗಳಿಗೆ ಇಂದು ಸರ್ವೋಚ್ಛ ನ್ಯಾಯಾಲಯ ತೆರೆ ಎಳೆದಿರುವುದು,ಕೊಟ್ಯಾಂತರ ಜಮ್ಮು ಕಾಶ್ಮಿರದ ಜನತೆಯ ಅಭ್ಯುಧ್ಯಯಕ್ಕೆ ಕಾರಣವಾಗಲಿದೆ ಎಂದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿಶ್ವ ಗುರುವಾಗಿದೆ,ದೇಶ ಒಂದೇ,ಕಾನುನು ಒಂದೇ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮೋದಿಜಿಯವರು ಜಮ್ಮು ಕಾಶ್ಮೀರ ವಿಷಯದಲ್ಲಿ ದೇಶದ ಜನತೆಗೆ ನೀಡಿರುವ ಆಶಯದಂತೆ ಕೆಲಸ ಮಾಡಿದ್ದಾರೆ ಸಮಸ್ತ ಜಮ್ಮು ಕಾಶ್ಮಿರದ ಜನತೆಗೆ ಕರಣ ಸುಬೇದಾರ ಅಭಿನಂದನೆಗಳು ತಿಳಿಸಿದ್ದಾರೆ.
ವರದಿ:ರಾಜಶೇಖರ ಮಾಲಿ ಪಾಟೀಲ್




















