ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿಯವರ ಜಾತ್ರೆಗೆ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಸಮಾಜದ ಬಾಂಧವರನ್ನು ಆಹ್ವಾನಿಸಿದರು. ಸ್ವಾಮಿಗಳು ಮಾತನಾಡಿ ತ್ಯಾಗದ ಪ್ರತೀಕವಾಗಿ ಶ್ರೀ ಮಹರ್ಷಿ ವಾಲ್ಮೀಕಿಯವರ ರಾಮಾಯಣವು ದಾರಿದೀಪವಾಗಿದೆ.ಶ್ರೀ ರಾಮ,ಲಕ್ಷ್ಮಣ,ಭರತ, ಶತ್ರುಗ್ನರ,ತ್ಯಾಗದ ಪ್ರತೀಕವಾಗಿ ನಡೆದ ಸಂಗತಿಗಳನ್ನು ಗುರುಗಳು ಕೂಡಿದ ಜನರಿಗೆ ತಿಳಿಸಿದರು ನಮ್ಮ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ,ಶೈಕ್ಷಣಿಕವಾಗಿ ಮುಂದುವರಿಯಲು ಈ ಮಹರ್ಷಿ ವಾಲ್ಮೀಕಿ ಜಾತ್ರೆಯು ಮುಖ್ಯವಾಗಿದೆ ಈ ಜಾತ್ರೆಗೆ ತಾವುಗಳು ತನು-ಮನ-ಧನದಿಂದ ಎಲ್ಲರೂ ಜಾತ್ರೆಗೆ ಹಾಜರಾಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರು,ಶ್ರೀ ಯಲ್ಲಪ್ಪ ತಳವಾರ,ಶ್ರೀ ಶ್ರೀ ಪಕ್ಕೀರೇಶ್ ಕಲ್ಲೂರ,ಶ್ರೀ ಪರಮೇಶಪ್ಪ ಪರಸನ್ನವರ, ಗಂಗಪ್ಪ ಶಿರಹಟ್ಟಿ,ನಿಂಗಪ್ಪ ಗೌರನ್ನವ್ವರ,ಶ್ರೀ ಹನಮಂತಪ್ಪ ಯಲವತ್ತಿ,ಶ್ರೀ ಕೆ ಒ ಹುಲಿಕಟ್ಟಿ,ಶ್ರೀ ಕಲ್ಲಪ್ಪನ್ನ ಶ್ರೀ ಭೀಮಪ್ಪ ಯಂಗಾಡಿ ಶ್ರೀ ಹನಮಂತ ಜಾಲಿಮರದ್,ಶ್ರೀ ರಾಜು ಓಲೇಕಾರ,ಶ್ರೀ ಗಂಗಾಧರ್ ಕರೀಲಿಂಗಣ್ಣವರ ಹಾಗೂ ಮುಂತಾದ ಗುರುಹಿರಿಯರು ಹಾಜರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ




















