ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ವತಿಯಿಂದ ಡಿಸೆಂಬರ್ 14ನೇ ದಿನಾಂಕದಂದು ನಡೆಯಲಿರುವ “ಕನ್ನಡ ಸಾಂಸ್ಕೃತಿಕ ಸಂಭ್ರಮ”ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನಡೆಸಿ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಗೌರವ ಅಧ್ಯಕ್ಷರಾದ ಚೌಡಯ್ಯ ಬಾವುರ ರವರು ನಾಡಿನ ಹಾಗೂ ಜಗತ್ತಿನೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಬಂಧುಗಳಿಗೆ 68ನೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಹಾಗೆಯೇ, ಕರ್ನಾಟಕವೆಂದು ಹೆಸರಾಗಿ ಇಂದಿಗೆ 50 ವರ್ಷ ಸಾಧಿಸಿದ್ದು ಸಾಕಷ್ಟು,ಸಾಧಿಸಬೇಕಾದದ್ದು ಬಹಳಷ್ಟು ಕನಸು ನನಸುಗಳ ಈ ಮಹಾಯಾನದಲ್ಲಿ ಸಾರ್ಥಕ ಹೆಜ್ಜೆ ಇಡುತ್ತಾ ಕನ್ನಡಾಂಬೆಯ ಕೀರ್ತಿ ಪತಾಕೆ ಯನ್ನು ಮುಗಿಲೆತ್ತರಕ್ಕೆ ಹಾರೈಸೋಣ “ಕನ್ನಡ ಸಾಂಸ್ಕೃತಿಕ ಸಂಭ್ರಮ”ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಬ್ದುಲ್ ಚಿಗನೂರ್ ತಾಲೂಕು ಕ.ರವೇ ಅಧ್ಯಕ್ಷರು,ಹನುಮಂತ್ರಾಯ ತೇಕರಾಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ,ಬಸವರೆಡ್ಡಿಗೌಡ ಹಬಸಿಹಾಳ ತಾಲೂಕು ಪ್ರಧಾನ ಕಾರ್ಯದರ್ಶಿ, ಸಿದ್ದು ಪೂಜಾರಿ ತುಮಕೂರ ತಾಲೂಕು ಉಪಾಧ್ಯಕ್ಷರು,ಸಿದ್ದು ಸುನಗಾರ್,ಬಸವಲಿಂಗ ಗುರುಸಣಗಿ,ರಮೇಶ್ ದೇವರೆಡ್ಡಿ,ಸುರೇಶ್ ಬಾಡದ, ವಿನೋದ್ ಸಾಹುಕಾರ್ ಗ್ರಾಮ ಘಟಕದ ಅಧ್ಯಕ್ಷರು,ಬಸವರಾಜ ದೊರೆ,ಗ್ರಾಮ.ಘಟಕ ಗೌರವಾಧ್ಯಕ್ಷರಾದ ಪರಶುರಾಮ ಚಲವಾದಿ,ಶರಣು ಅಂಗಡಿ,ಬಂದೇಶ ವಿಶ್ವಕರ್ಮ,ಬಸುಗೌಡ ಮಸರಕಲ್,ಜಾಫರ್,ಸುರೇಶ ಕಲಾಲ್,ವೆಂಕಟೇಶ್ ಹೂಗಾರ್,ವೆಂಕಟೇಶ್ ಮಾಚನೂರ ಸಂಗರೆಡ್ಡಿ, ವೆಂಕಟೇಶ್ ಕಲಾಲ್,ದೇವು,ಸೈದು,ಸತೀಶ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ತುಮಕೂರಿನ ಸರ್ವ ಸದಸ್ಯರು ಈ ಸಭೆಯಲ್ಲಿ ಹಾಜರಿದ್ದರು.
ವರದಿ:ಶಿವರಾಜ ಸಾಹುಕಾರ್,ವಡಗೇರಾ




















