ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಟ್ಟಳ್ಳಿ ಮಾರಮ್ಮವಾಲಿಬಾಲ್ ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಿದ ಶಾಸಕ ಎಂ.ಆರ್.ಮಂಜುನಾಥ್

ಹನೂರು:ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ವಾಲಿಭಾಲ್ ಟೂರ್ನಿಯಲ್ಲಿ ದಾಸಪುರ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಚನ್ನರಾಯಪಟ್ಟಣ ತಂಡ ಜಯ ಗಳಿಸಿದೆ.
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ವಾಲಿಬಾಲ್ ಅಸೋಸಿಯೇಷನ್ ಹಾಗೂ ಕಲ್ಕಿ ಬಾಯ್ಸ್ ವತಿಯಿಂದ ಶಾಸಕ ಎಂ.ಆರ್.ಮಂಜುನಾಥ್ ಕಪ್ ಎಂಬ ಶೀರ್ಷಿಕೆಯಡಿಯಲ್ಲಿ ಹೊನಲು ಬೆಳಕಿನ ಪುರುಷರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು ಅಂತಿಮವಾಗಿ ದಾಸಪುರ ತಂಡ ಪ್ರಥಮ ಸ್ಥಾನಗಳಿಸಿದರೆ,ಚನ್ನರಾಯಪಟ್ಟಣ ತಂಡ ದ್ವೀತಿಯ ಸ್ಥಾನ,ತೃತೀಯ ಸ್ಥಾನವನ್ನು ಕಲ್ಕಿ ಬಾಯ್ಸ್,ನಾಲ್ಕನೇ ಬಹುಮಾನ ಕಲ್ಕಿ ವಾರಿಯಾರ್ಸ್ ತಂಡದ ಪಾಲಾಯಿತು.
ಈಟೂರ್ನಿಯಲ್ಲಿ ಮೈಸೂರು,ಮಂಡ್ಯ ಚಾಮರಾಜನಗ,ರಾಮನಗರ,ಹಾಸನ ಜಿಲ್ಲೆಯ ನಾನಾ ಕಡೆಗಳಿಂದ ಹೆಚ್ಚಿನ ತಂಡಗಳು ಪಾಲ್ಗೊಂಡಿದ್ದವು ಈ ಟೂರ್ನಿಯಲ್ಲಿ ಪ್ರಥಮ ಬಹುಮಾನ ರೂ ೨೫೦೦೦ (ಆಕರ್ಷಕ ಟ್ರೋಪಿ)ದ್ವಿತೀಯ ಬಹುಮಾನ ರೂ೨೦,೦೦೦ ಆಕರ್ಷಕ ಟ್ರೋಪಿಹಾಗೂ ತೃತೀಯ ಬಹುಮಾನ ರೂ ೧೫೦೦೦ ಆಕರ್ಷಕ ಟ್ರೋಫಿ, ರೂ೧೦,೦೦೦ ಆಕರ್ಷಕ ಟ್ರೋಫಿ ನಿಗಧಿಪಡಿಸಲಾಗಿತ್ತು.ಈ ಟೂರ್ನಿಯ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಶಾಸಕ ಎಮ್.ಆರ್.ಮಂಜುನಾಥ್ ಮಾತನಾಡಿ ಸೋಲು ಗೆಲುವು ಯಾವುದೇ ಇರಲಿ ಸ್ನೇಹಮಯದಿಂದ ಆಡಬೇಕು ಕ್ಷೇತ್ರದಲ್ಲಿನ ಉತ್ತಮ ಆಟಗಾರರ ಪ್ರತಿಭೆಗಳಿಗೆ ಶಕ್ತಿ ತುಂಬಲು ಸದಾ ಸಿದ್ದ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್,ಸಬ್ ಇನ್ಸಪೆಕ್ಟರ್ ಮಂಜುನಾಥ್ ಪ್ರಸಾದ್,ಮಡಿವಾಳ ಸಮುದಾಯ ಸಂಘದ ಅಧ್ಯಕ್ಷ ವಿಜಯ್ ಸ್ಥಳೀಯ ಮುಖಂಡರಾದ ರಾಜುಗೌಡ,ವೆಂಕಟೇಶ್,ಸತೀಶ್,ರಾಜಣ್ಣ, ಜಸ್ಸಿಮ್,ಕೃಷ್ಣಣ್ಣ,ನಾಗೇಶ್,ವೆಂಕಟೇಶ್ ಹಾಗೂ ಆಯೋಜಕರಾದ ವಿಶ್ವಾಸ್,ಶ್ರೀನಿವಾಸ್, ನಾಗರೆಡ್ಡಿ,ವಿಕಾಸ್ ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ