ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಣರಾಜ್ಯೋತ್ಸವ ದಿನದಂದೇ ಗಣ್ಯರಿಂದ ರೈತ ಗೀತೆಗೆ ಅವಮಾನ:ಸಂಘಟನೆಗಳ ಆಕ್ರೋಶ

ವಿಜಯನಗರ/ಕೊಟ್ಟೂರು:ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ ಭಾರತದಾದ್ಯಂತ ಸರ್ಕಾರಿ ರಜಾ ದಿನ ಸಾಮಾನ್ಯವಾಗಿ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ,ಸರಕಾರಿ ಕಛೇರಿಗಳ ಒಕ್ಕೂಟದಿಂದ ಕಾರ್ಯಕ್ರಮವನ್ನು ಹಮ್ಮಿಕೊಳಲಾಗುವುದು ಈ ದಿನ ಬಹಳ ಮಹತ್ವವಾದದ್ದು,ಶ್ರೇಷ್ಠವಾದ ದಿನ‌,ಇಂತಹ ಪವಿತ್ರತೆ ಪಡೆದಿರುವ ಈ ದಿನವನ್ನು ಬಹಳ ಅಚ್ಚುಕಟ್ಟಾಗಿ ಆಚರಣೆ ಮಾಡಿದ ದೇಶದ ಎಲ್ಲಾ ಜನತೆಗೆ ನಮ್ಮ
“ಕರುನಾಡ ಕಂದ”ಪತ್ರಿಕೆ ಪರವಾಗಿ ಸಂವಿಧಾನ ದಿನದ ಶುಭಾಶಯಗಳನ್ನು ಹೇಳಿ ಬಿಡೋಣ!

ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ದಿನಾಂಕ-೨೬-1-2024 ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ರಾಜ್ಯೋತ್ಸವದಂದು ಎಲ್ಲಾ ಶಾಲಾ ಮಕ್ಕಳ ನೃತ್ಯ ಹಾಗೂ ಹಾಡಿನ ಮುಖಾಂತರ ಸಾರ್ವಜನಿಕರಿಗೆ ಮನರಂಜನೆಯನ್ನು ಕೊಡುವ ಹಬ್ಬವಾಗಿದೆ.ಪಟ್ಟಣದ ತಾಲೂಕಿನ ಕ್ರೀಡಾಂಗಣದಲ್ಲಿ ತಾಲುಕು ಆಡಳಿತವತಿಯಿಂದ 75 ನೇ ಗಣರಾಜ್ಯೋತ್ಸವ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾಯ೯ಕ್ರಮದಲ್ಲಿ ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ಇಲಾಖೆಯ ಸಿಬ್ಬಂದಿಗಳು ಮತ್ತು ತಾಲೂಕಿನ ಎಲ್ಲಾ ವಿದ್ಯಾಥಿ೯ಗಳು ಪಥಸಂಚಲನ ನಡೆಸಿದರು.
ಈ ರಾಷ್ಟ್ರೀಯ ಹಬ್ಬದಂದು,ಕಾಯ೯ಕ್ರಮದ ಕೇಂದ್ರ ಬಿಂದು ತಾಲೂಕು ದಂಡಾಧಿಕಾರಿಗಳಾದ ಅಮರೇಶ ಜಿ ಕೆ ರವರು ಆಗಿರುತ್ತಾರೆ.
ಈ ಹಬ್ಬದಂದು ರಾಷ್ಟ್ರಗೀತೆ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡುವ ಸಂಪ್ರದಾಯವಿದೆ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಿ ಶಾಸಕರಾದ ಕೆ.ನೇಮಿರಾಜ್ ನಾಯ್ಕ್ ರವರು ವಿಧಾನಸಭಾ ಕ್ಷೇತ್ರ ಹಗರಿಬೊಮ್ಮನಹಳ್ಳಿಯಲ್ಲಿ ಇವರು ಮತ್ತೊಂದು ತಾಲೂಕಿನ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ರೈತ ಗೀತೆಯನ್ನು ಹಾಡಲಿಕ್ಕೆ ಹೇಳಿದರು,ತದನಂತರ ಅದನ್ನು ನಿಲ್ಲಿಸಿ,ರೈತ ಸಂಕುಲಕ್ಕೆ ಅವಮಾನ ಮಾಡಿದಂತೆ ಆಗಿದೆ ಎಂದು ಅಲ್ಲಿನ ರೈತ ಸಂಘಟನೆಯ ಮುಖಂಡರುಗಳು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ತಾಲೂಕು ಅಧ್ಯಕ್ಷರು ತಾಲೂಕಿನ ದಂಡಾಧಿಕಾರಿಯೇ ಆಗಿರುತ್ತಾರೆ ಇದಕ್ಕೆ ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ತಹಶೀಲ್ದಾರ್ ರವರನ್ನು ಮಾಧ್ಯಮ ಮಿತ್ರರು ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳಿಗೆ ಯಾವ ರೀತಿ ಕ್ರಮ ಜರುಗಿಸುವಿರಿ? ಹಾಗೂ ಕಾರ್ಯಕ್ರಮದ ಸಂಘಟನಾಕಾರರಿಗೆ ಅಹ್ವಾನ ಪತ್ರಿಕೆ ನೀಡಿಲ್ಲ.ಈ ಕಾರ್ಯಕ್ರಮ ಗೊಂದಲಕ್ಕೆ ಈಡಾಗಿದೆ ಎಂದೆಲ್ಲಾ ವಿಚಾರಣೆ ನಡೆಸಿದಾಗ ಹೌದು ಸ್ವಲ್ಪ ನೂನ್ಯತೆಗಳ ಆಗಿವೆ,ಇನ್ನು ಮುಂದೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಅಧಿಕಾರಿಗಳ ವಿರುದ್ಧ ಮುಂದೆ ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಗುಡಿಯಾರ್ ಮಲ್ಲಿಕಾರ್ಜುನ್ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿಗಳು ಎಚ್ಚರಿಸಿರುವರಂತೆ,ಈ ಹಾಡನ್ನು ಹಾಡದಿರುವುದಕ್ಕೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ಜಯಪ್ರಕಾಶ ನಾಯ್ಕ,ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ,ಜಿಲ್ಲಾ ಮುಖಂಡರಾದ ಕೊಟ್ರಯ್ಯ,ನೀಲನ ಕಂಠನ ಗೌಡ್ರು, ರಮೇಶ್ ನಾಯ್ಕ,ಸುರೇಶ್ ನಾಯ್ಕ ಮತ್ತು ಕೊಟ್ಟೂರು ತಾಲೂಕು ಎಸ್ ಡಿ ಎಂ ಸಿ ಅಧ್ಯಕ್ಷರು ಕೆ.ಎಸ್ ಹರೀಶ್,ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಂಸ್ಥೆ ತಾಲೂಕು ಅಧ್ಯಕ್ಷರು ಬಿ.ಸತೀಶ್ ಮತ್ತು ತಾಲೂಕಿನ ಇನ್ನಿತರ ವಿವಿಧ ಸಂಘಟನೆಯ ಪದಾಧಿಕಾರಿಗಳು ಕೂಡಾ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆಂಕಟಸ್ವಾಮಿ ಸಿಪಿಐ,ಎ ನಸುರುಲ್ಲಾ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳು ಹಾಗೂ ಸದಸ್ಯರು ಶಶಿಧರ್ ಮೈದೂರ್ ಮತ್ತು ಅಜ್ಜಪ್ಪ ಎಲ್ಲಾ ಇಸಿಓ,ಸಿಆರ್‌ಪಿ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳು ಸಾರ್ವಜನಿಕರು ಸೇರಿದ್ದರು.

ವರದಿ-ವೈ.ಮಹೇಶ್ ಕುಮಾರ್,ಕೊಟ್ಟೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ