ಶಹಾಪುರ:ಕೂಲಿಕಾರರ ನಿಗಮ ಮಂಡಳಿ ರಚನೆ ಮಾಡಿ ಕೂಲಿಕಾರರ ಸರ್ವಾಂಗೀಣ ಅಭಿವೃದ್ಧಿಗಾಗಿ, ತಮಿಳು ನಾಡು ಮಾದರಿಯಂತೆ ನಮ್ಮ ರಾಜ್ಯ ರೈತರಿಗೆ ಅನುದಾನ ಒದಗಿಸಿಕೊಡಬೇಕು ತಾವೂ ಬರಗಾಲದ ಛಾಯೆ ಆವರಿಸಿದರಿಂದ ಪ್ರತಿ ದಿನಕ್ಕೆ 6 ರೂ.ಗಳ ಕೂಲಿ ಸಂಬಳ ನೀಡಬೇಕು.
ಮೈಕ್ರೋ ಫೈನಾನಸ್,ಲೇವಾದೇವಿಯಿಂದ ಪಡೆದ ಕೂಲಿಕಾರರ ಸಾಲವನ್ನು ಮನ್ನಾ ಮಾಡಬೇಕು. ಕೂಲಿಕಾರರ ನಾನಾ ಬೇಡಿಕೆಗಳ ಆಗ್ರಹಿಸಿ ಫೆ,5 ರಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರ ಕಚೇರಿ ಮುಂದೆ ಕೂಲಿಕಾರರು ಬೃಹತ್ ಪ್ರತಿಭಟನೆ,ಮೆರವಣಿಗೆ ಮತ್ತು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷರಾದ ದವರ್ ಸಾಬ್ ನದಾಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದಿನ ಪ್ರತಿಭಟನೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಕೂಲಿಕಾರರು ಭಾಗವಹಿಸಲಿದ್ದಾರೆ. ಶಹಾಪುರ ತಾಲೂಕಿನ ಸುತ್ತಮುತ್ತಲಿನ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.
ವರದಿ ರಾಜಶೇಖರ ಮಾಲಿ ಪಾಟೀಲ್




















