ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದಲಿತ ಸೂರ್ಯ, ಅಂಬೇಡ್ಕರ್

ನೂರಾರು ನೋವುಗಳು,
ಸಹಸ್ರಾರು ಅವಮಾನಗಳು,
ಒಡಲಿನಲಿ ಇಟ್ಟುಕೊಂಡು,
ಅವಮಾನ ಮಾಡಿದವರೆದುರಿಗೆ
ತಲೆ ಎತ್ತಿ ನಡೆದು,ಅವರು ತಲೆ ತಗ್ಗಿಸುವಂತೆ ಮಾಡಿದ
ದಲಿತ ಸೂರ್ಯ ಅಂಬೇಡ್ಕರ್.

ಅಸಮಾನತೆ ತೊಲಗಲು
ಶಿಕ್ಷಣ ವೆಂಬ ಅಸ್ತ್ರವ
ಪ್ರಯೋಗಿಸಿ, ಸಮಾನತೆ,
ಸೌಹಾರ್ದತೆಯ ಬೀಜ ಬಿತ್ತಿ
‌ಹಕ್ಕುಗಳಿಗಾಗಿ , ಸಂಘಟನೆಯ
ದಾರಿ ತೋರಿ , ಹೋರಾಟವ
ಹುಟ್ಟು ಹಾಕಿದ,
ದಲಿತ ಸೂರ್ಯ ಅಂಬೇಡ್ಕರ್.

ಓದು ಓದು,ಓದು ಎಂದು,
ವಿಶ್ವವನೆಲ್ಲ ಓಡಾಡಿ, ಸಂವಿಧಾನ ವ ಬರೆದು,
ಅದರ ಅನುಷ್ಠಾನ ಮಾಡಿ
ಎಲ್ಲರಿಂದಲೂ ಸೈ ಎನಿಸಿಕೊಂಡ
ದಲಿತ ಸೂರ್ಯ ಅಂಬೇಡ್ಕರ್.

ಜಗತ್ತಿಗೆ ಒಬ್ಬನೇ ಸೂರ್ಯ,
ಭಾರತಕ್ಕೆ ಒಬ್ಬನೇ ಸೂರ್ಯ
ಅವರೇ ನಮ್ಮ ಪ್ರಖರ ಬೆಳಕು
ದಲಿತ ಸೂರ್ಯ ಅಂಬೇಡ್ಕರ್

ನವ ಭಾರತದ ನಿರ್ಮಾತೃ
ಸಂವಿಧಾನ ಶಿಲ್ಪಿ,ಭಾರತ ರತ್ನ
ಅಮರ ಜೀವಿ, ದಲಿತ ಸೂರ್ಯ ಅಂಬೇಡ್ಕರ್,
ನಿಮ್ಮ ಜನುಮ ದಿನದಂದು
ನಿಮಗೆ ಅರ್ಪಿಸುವೆ,
ಕೋಟಿ ನಮಸ್ಕಾರ.

ಶಿವಪ್ರಸಾದ್ ಹಾದಿಮನಿ.
ಕೊಪ್ಪಳ..

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ