ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹುನುಗುಂದ ತಾಲೂಕ ಸಾಹಿತ್ಯ ಚಟುವಟಿಕೆಯಿಂದ ಗುರುತಿಸಿಕೊಂಡಿದೆ:ಯಾಕೋಳ್ಳಿ

ಬಾಗಲಕೋಟ ಜಿಲ್ಲೆಯ ಹುನಗುಂದದ ಲೇಖಕ ಎಂ.ಡಿ ಚಿತ್ತರಗಿ ಅವರು ಮೊಟ್ಟಮೊದಲ ಬಾರಿಗೆ 5 ಸಾಲು 15 ಅಕ್ಷರ ಪದಗಳನ್ನು ಒಳಗೊಂಡ ಕವನ ಸಂಕಲನ ಹೊರ ತರುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಸರು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ ಎಂದು ಸವದತ್ತಿಯ ಸಾಹಿತಿ ವೈ.ಎಂ.ಯಾಕೋಳ್ಳಿ ಹೇಳಿದರು.
ಹುನಗುಂದ ಪಟ್ಟಣದ ಹೂನ ಕುಸುಮ ಸಾಹಿತ್ಯ ವೇದಿಕೆ ಹಾಗೂ ವಿ ಎಮ್ ಕೆ ಎಸ್ ಆರ್ ವಸ್ತ್ರದ ಹಾಗೂ ಕಲಾ ವಿಜ್ಞಾನ ಮತ್ತು ವಿ ಎಸ್ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ವಿ ಮ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಲೇಖಕ ಎಂ ಡಿ ಚಿತ್ತರಗಿ ಅವರ ಅಕ್ಷರ ಹೂ ಎಂಬ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಐದು ಅಕ್ಷರಗಳ ಪಂಚ ಪಾದಗಳ ಪುಟ್ಟ ಮದ್ಯ ಪ್ರಯೋಗಗಳನ್ನು ಮಾಡಿದ್ದಾರೆ ೨0೧ ಪದ್ಯಗಳನ್ನು ರಚಿಸಿದ್ದಾರೆ ಯಾವುದೇ ಪದ್ಯದಲ್ಲಿಯೂ ಅಕ್ಷರಗಳ ಲೆಕ್ಕಾಚಾರ ತಪ್ಪಿಲ್ಲ ಜೊತೆಗೆ ಕಾವ್ಯವು ಸೂರಿ ಹೋಗಿಲ್ಲ ನಿಜಕ್ಕೂ ಇದೊಂದು ವಿನೂತನ ಪ್ರಯೋಗ ಕಾವ್ಯವಾಗಿದೆ ಇಲ್ಲಿನ ಕಿರುಪದ್ಯಗಳು ವಿಶೇಷವಾಗಿವೆ ಕಾವ್ಯನಾತ್ಮಕ ಮತ್ತು ಅಕ್ಷರಾತ್ಮಕ ದೃಷ್ಟಿಕೋನದಿಂದ ಕವನವನ್ನು ರಚಿಸುವ ಮೂಲಕ ಕವಿ ಹೊಸ ಪದಗಳ ಸಂಕಲನ ಪ್ರಯೋಗಕ್ಕೆ ಮುಂದಾಗಿದ್ದಾರೆ ಕವಿ ಸಂಭ್ರಮದ ಜೊತೆಗೆ ವಾಸ್ತವಿಕ ನೆಲೆ ಗಮನಿಸಿದ್ದನ್ನು ಕಾಣಬಹುದು ಆಧುನಿಕ ಜಗತ್ತಿನಲ್ಲಿ ಅನೇಕ ತಲ್ಲನ ಗಳನ್ನು ಕವನ ಸಂಕಲನ ಒಳಗೊಂಡಿದೆ ಪ್ರಯೋಗದೃಷ್ಟಿಯಿಂದ ಅತ್ಯದ್ಭುತ ಕವನ ಸಂಕಲನ ಕೊಟ್ಟಿದ್ದಾರೆ. ಜಗತ್ತಿನ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಇತಿಹಾಸವಿದೆ ಜಿಲ್ಲೆಯಲ್ಲಿ ಹುನಗುಂದ ಸಾಹಿತ್ಯ ಚಟುವಟಿಕೆಯಿಂದ ಗುರುತಿಸಿಕೊಂಡಿದೆ ಎಂದರು ಲೇಖಕ ಎಂ ಡಿ ಚಿತ್ತರಗಿ ಮಾತನಾಡಿ ಇಂದಿನ ದಿನಗಳಲ್ಲಿ ಪುಸ್ತಕ ಹಾಗೂ ಸಾಹಿತ್ಯ ಕತ್ತೆ ಕಾದಂಬರಿ ಗಳ ಓದಿನ ಕೊರತೆ ಇದೆ ಮಕ್ಕಳಿಗೆ ಪುಸ್ತಕಗಳನ್ನು ಓದಿಸುವಲ್ಲಿ ನಾವು ವಿಫಲರಾಗಿದ್ದೇವೆ ನಮ್ಮ ನೆಲದ ಅಸ್ಮಿತೆ ಆಗಿರುವ ಸಾಂಪ್ರದಾಯಿಕ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಕಥೆ ಕಾದಂಬರಿ ಕವನ ಸೇರಿ ಸಾಹಿತ್ಯದ ನಾನಾ ಪ್ರಕಾರ ಗಳಲ್ಲಿ ದಾಖಲಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ವಿಮಸಂಘದ ನಿರ್ದೇಶಕ ಅರುಣೋದಯ ದುಡ್ಗಿ ಪ್ರಾಚಾರ್ಯ ಎಸ್ ಕೆ ಮಠ ಮಾತನಾಡಿದರು ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್ ಎಸ್ ಮುಡಪಲದಿನ್ನಿ, ಪ್ರಾಸ್ತಾವಿಕವಾಗಿ ಮಾತನಾಡಿದರು ಗೀತಾ ತಾರಿವಾಳ, ನಿರೂಪಿಸಿದರು ಗುಂಡಪ್ಪ ಕುರಿ ಸ್ವಾಗತಿಸಿದರು ಸಿದ್ದು ಶೀಲವಂತರ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ