ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಿ- ಗುರುಮಠಕಲ್ MRPS ತಾಲೂಕಾಧ್ಯಕ್ಷ ರವಿ ಬುರನೋಳ್

ಯಾದಗಿರಿ/ ಗುರುಮಠಕಲ್ : ತಾಲೂಕಿನ ಎಂ ಟಿ ಪಲ್ಲಿ ಗ್ರಾಮದಲ್ಲಿ ನಡೆದ ಒಳಮೀಸಲಾತಿ ಸಮೀಕ್ಷೆಗೆ ಬಂದಿರುವ ಅಧಿಕಾರಿಗಳಿಗೆ ಮಾಹಿತಿ ನೀಡಿ, ತಾಲೂಕಿನ ಎಲ್ಲಾ ಮಾದಿಗ ಸಮಾಜದ ಕುಲಬಾಂಧವರು ದಯವಿಟ್ಟು ಒಳಮೀಸಲಾತಿ ಜಾರಿಗೊಳಿಸಲು ಸಮೀಕ್ಷೆಗೆ ತಮ್ಮ ಮನೆಗೆ ಬಂದಾಗ ತಾವುಗಳು ಕ್ರಮ. ಸಂಖ್ಯೆ : 61 ರಲ್ಲಿ ಪರಿಶಿಷ್ಟ ಜಾತಿ ಮಾದಿಗ ಎಂದು ಬರೆಯಿಸಬೇಕು ಎಂದು ಹೇಳಿದರು.

ಎಮ್. ಟಿ. ಪಲ್ಲಿ ಗ್ರಾಮದ ಮಾದಿಗ ಸಮಾಜದ ಎಲ್ಲಾ ಹಿರಿಯರು, ಯುವಕರು ಸಮಾಜ ಸೇವಕರು ವಿದ್ಯಾವಂತರು ಖುದ್ದಾಗಿ ಒಂದುಗೂಡಿ ಮನೆ ಮನೆಗೆ ತೆರಳಿ ಸರಿಯಾದ ಮಾಹಿತಿ ನೀಡಬೇಕು ಹಾಗೂ ಸಮೀಕ್ಷೆ ಮಾಡಲು ಬಂದ ಸರ್ಕಾರಿ ನೌಕರರಿಗೆ ಬಹಳ ಸೂಕ್ಷ್ಮವಾಗಿ ವಿನಯದಿಂದ ಸ್ವಾಗತಿಸಬೇಕು ಎಂದು ವಿನಂತಿ ಮಾಡಿಕೊಂಡರು.

ಯಾರಾದರೂ ಬೆಂಗಳೂರು, ಪುಣೆ, ಮುಂಬೈ, ಮಹಾರಾಷ್ಟ್ರಕ್ಕೆ ಹೋಗಿದ್ದರೆ ಅವರಿಗೆ ಕರೆ ಮಾಡಿ ತಿಳಿಸಿ ಕುಟುಂಬದ ಒಬ್ಬ ಸದ್ಯಸರು ಆದರೂ ಬರೋದಕ್ಕೆ ಹೇಳಿ…ಆದಷ್ಟು ಎಲ್ಲರ ಗಮನಕ್ಕೆ ತಂದು ಸಮೀಕ್ಷೆಗೆ ಸಹಕಾರ ನೀಡಲು ತಿಳಿಸಿದರು.

ಕ್ರಮ. ಸಂಖ್ಯೆ : 61 ರಲ್ಲಿ ಪರಿಶಿಷ್ಟ ಜಾತಿ ಮಾದಿಗ ಎಂದು ಬರೆಸಬೇಕು, ಯಾವುದೇ ಕಾರಣಕ್ಕೂ ಮಾದರ, ಹರಿಜನ ಮಾತಂಗಿ ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಜಾಂಭವ ಎಂದು ಯಾರೂ ಇತರೆ ಬರೆಸ ಬೇಡಿ ಎಂದು ಮನವಿ ಮಾಡಿಕೊಂಡರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ