ಬೀದರ / ಬಸವಕಲ್ಯಾಣ : ತಾಲೂಕಿನ ಬಗದುರಿ ಗ್ರಾಮದಲ್ಲಿ ಸುಮಾರು 4 ತಿಂಗಳಿನಿಂದ ರೈತರು ಮಂಗಗಳ ಹಾವಳಿ ತಡೆಗಟ್ಟುವ ಸಲುವಾಗಿ ಗ್ರಾಮದ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮುಖಾಂತರ ಸುಮಾರು ಸಲ ಸೂಚಿಸಿ,. ತಾಲೂಕಾ ದಂಡಾಧಿಕಾರಿಗಳ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು ಕೂಡ ಸಮಸ್ಯೆ ಬಗೆಹರಿಯದ ಕಾರಣ ಇಂದು ದಿನಾಂಕ: 27/05/2025 ರಂದು ಮತ್ತೆ ಗ್ರಾಮದ ಸುಮಾರು 50 ರಿಂದ 100 ಜನ ರೈತರು ತಹಸೀಲ್ ಕಛೇರಿ ಮುಂದೆ ಧರಣಿ ಪ್ರಾರಂಭಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ದಂಡಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ ರೈತರ ಸಮಸ್ಯೆಗಳು ಆಲಿಸಿ ಕೊನೇಗೂ ಒಂದು ಹಂತಕ್ಕೆ ಬಂದು ನಿಂತಿದ್ದು, ತಾಲೂಕಿನ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮಂಗಗಳನ್ನು ಹಿಡಿಯುವ ವೆಚ್ಚ ಪಂಚಾಯತಿಯಿಂದ ಕೊಡಲು ಸೂಚಿಸಿ ರೈತರ ಸಮಸ್ಯೆ ಬಗೆಹರಿಸಿ ಕೂಡಲೇ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಪ್ರಾರಂಭ ಮಾಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಸಹ ಸೂಚಿಸಿದಿರು. ತದ ನಂತರ ಗ್ರಾಮದ ಎಲ್ಲಾ ರೈತರು ಅಧಿಕಾರಿಗಳು ನೀಡಿದ ಆದೇಶ ಪತ್ರದ ಭರವಸೇಯ ಮೇರೆಗೆ ರೈತರು ತಮ್ಮ ಅರೆ ಬೆತ್ತಲೆ ದೀರ್ಘದಂಡ ನಮಸ್ಕಾರ ಧರಣಿ ಸತ್ಯಾಗ್ರಹ ಹಿಂಪಡೆದರು. ಈ ಸಂದರ್ಭದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ದತ್ತಾತ್ರಿ ಗಾಧಾ, ತಾಲೂಕು ಪಂಚಾಯತ ಕಾರ್ಯನಿವಾರ್ಹಕ ರಮೇಶ ಸುಲ್ಫೀ, ಅರಣ್ಯಾಧಿಕಾರಿಗಳಾದ ಮಹೇಂದ್ರಕುಮಾರ ಮೌರ್ಯ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ ಸಲಗರ, ಗ್ರಾಮ ಪಂಚಾಯತ ಸದಸ್ಯರಾದ ಭೀಮಶಾ ಮಂದಿರಕರ ಸೇರಿದಂತೆ ಗ್ರಾಮದ ರೈತ ಮುಖಂಡರಾದ ಪ್ರಶಾಂತ ಬಿರಾದಾರ, ಶಿವಾನಂದ ಬಿರಾದಾರ, ಧನಶೆಟ್ಟಿ ರಾಜೋಳೆ, ಸೂರ್ಯಕಾಂತ ಬಿರಾದಾರ, ಮಹಾರುದ್ರ ಬಿರಾದಾರ, ನಾರಾಯಣರಾವ ಬಿರಾದಾರ, ಮಹಾದೇವ ಪೂಜಾರಿ, ರಾಘವೇಂದ್ರ ಪೂಜಾರಿ, ನಾಗೇಶ ಮಹಾಗಾಂವ, ಶರಣಪ್ಪಾ ಬಿರಾದಾರ, ಪರಮೇಶ್ವರ, ಬಿರಾದಾರ, ಜೀತೇಂದ್ರ ಮಂದಿರಕರ, ನಾರಾಯಣ ಲಾಡೆ, ಶಾಂತಕುಮಾರ ಸಿಂಗ್ರೆ, ವಿಜಯಕುಮಾರ ಬಿರಾದಾರ, ಶಂಕರ ರಾಜೋಳೆ, ಶಾಂತಕುಮಾರ ಬಿರಾದಾರ, ಚನ್ನವೀರ ಮಹಾಗಾಂವ, ಅಖೀಲೇಶ ಬಿರಾದಾರ, ನಾಗರಾಜಕೇಶ್ವರ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳ ರೈತರು ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ
