ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ ಪುಸ್ತಕಾವಲೋಕನ : “ಮನಕ್ಕೆ ತಂಪು, ಕಿವಿಗೆ ಇಂಪು” ನೀಡುವ ,”ಭಾವಗೀತೆಗಳ “ಶ್ವೇತ ಹೃದಯ”

ಪುಸ್ತಕದ ಹೆಸರು : ಶ್ವೇತ ಹೃದಯ (ಭಾವಗೀತೆಗಳ ಸಂಕಲನ)
ಕವಿ : ಶ್ರೀ ಈರಪ್ಪ ಬಿಜಲಿ
ಪ್ರಕಟಣೆಯ ವರ್ಷ. ೨೦೨೧.
ಬೆಲೆ : ೧೦೦ ರೂ.ಗಳು ಮಾತ್ರ.
ಮುದ್ರಕರು : ಭವಾನಿ ಪ್ರಿಂಟರ್ಸ್, ಬೆಟಗೇರಿ-ಗದಗ.

ವೃತ್ತಿಯಿಂದ ಶಿಕ್ಷಕರಾಗಿರುವ ಭಾಗ್ಯನಗರದ ನಿವಾಸಿಗಳಾದ ಈರಪ್ಪ ಬಿಜಲಿ ಯವರು, ಪ್ರವೃತ್ತಿ ಯಿಂದ ಸಾಹಿತಿಗಳಾಗಿರುವುದು, ವಿಶೇಷವಾದುದಲ್ಲವಾದರೂ
ಅವರು ತಮ್ಮನ್ನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಹಿತ್ಯದ ಹಲವಾರು ಪ್ರಕಾರಗಳಾದ , ಗಜಲ್,ಶಾಯಿರಿ, ಹಾಯ್ಕು,
ರುಬಾಯಿ,ಹನಿಗವನ, ಕವನ,
ಮುಂತಾದವುಗಳನ್ನು, ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಪ್ ಮೂಲಕ
ಬರೆಯುತ್ತಾ ,ಸಹೃದಯರ ಗಮನ ಸೆಳೆಯುತ್ತಿರುವುದಂತೂ ವಿಶೇಷವಾದ ವಿಷಯವೇ ಆಗಿದೆ ಎಂದರೆ ಬಹುಶಃ ಅದು ಅತಿಶಯದ ಮಾತಲ್ಲ, ಎಂಬುದು ನನ್ನ ಅಭಿಪ್ರಾಯ.
ಕನ್ನಡ ಸಾಹಿತ್ಯದಲ್ಲಿ ಕವನ ಸಾಹಿತ್ಯ ಪ್ರಕಾರಕ್ಕಿರುವಷ್ಟೇ ಮಹತ್ವ , ಭಾವಗೀತೆ ಸಾಹಿತ್ಯ ಪ್ರಕಾರಕ್ಕೂ ಇದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ
ಯುವಕವಿಗಳಲ್ಲಿ ಒಬ್ಬರಾದ ಈರಪ್ಪ ಬಿಜಲಿಯವರ ೬೪ ಭಾವಗೀತೆಗಳ ‘ಶ್ವೇತ ಹೃದಯ ‘
ಪುಸ್ತಕದ ಅವಲೋಕನವೇ ಈ
ಬರಹ.
ಭಾವನೆಗಳಿಗೆ ಅಕ್ಷರ ರೂಪ ನೀಡಿ, ಲಯ, ತಾಳ ಬದ್ಧತೆಯ ಜೊತೆಗೆ, ಸಂಗೀತಮಯವಾಗಿ
ಹೊರಹೊಮ್ಮುವ ಸಾಹಿತ್ಯವೇ
ಭಾವಗೀತೆಗಳು. ಹೆಸರೇ ಹೇಳುವಂತೆ ಗೀತೆಯು ಭಾವ ಪ್ರಧಾನವಾಗಿ ,ಕೇಳಲು ಇಂಪಾಗಿದ್ದರೆ ,ಅಂತಹ ಸಾಹಿತ್ಯವನ್ನು ಮತ್ತೆ ಮತ್ತೆ ಮೆಲುಕು ಹಾಕಬೇಕೆನಿಸುತ್ತದೆ.
ಅಂತಹ ಭಾವಗೀತೆಗಳು, ಈರಪ್ಪ ಬಿಜಲಿಯವರ ಈ
‘ಶ್ವೇತ ಹೃದಯದಲ್ಲಿವೆ.

ಹಾಗಾದರೆ ತಡವೇಕೆ, ಬನ್ನಿ, ಶ್ವೇತ ಹೃದಯದ ಭಾವಗೀತೆಗಳನ್ನು ಆಸ್ವಾದಿಸೋಣ. ಮನ ಮತ್ತು ಕಿವಿಗಳಿಗೆ ತಂಪು, ಮತ್ತು ಇಂಪನ್ನು ನೀಡುವ ಭಾವಗೀತೆಗಳು ಇವಾಗಿವೆ.

ಆರಂಭದಲ್ಲಿ ಕವಿ ಆದಿ ಪೂಜಿತ ವಿನಾಯಕ (ಗಣೇಶ)ನನ್ನು ಸ್ಮರಿಸಿರುವುದು ಹೀಗೆ,,.
“ಆದಿ ಪೂಜಿತ, ವಿಘ್ನ ನೀಗಿಸು
ಭಕ್ತಿ ಭಾವದಿ ಭಜಿಸುವೆನು
ಮೋದಕ ಪ್ರಿಯ ಏಕದಂತನೆ
ಶಾಂತ ಚಿತ್ತದಿ ಪೂಜಿಪೆನು.” ಎಂದು ಭಕ್ತಿ ಪೂರ್ವಕವಾಗಿ ಗಣೇಶನನ್ನು ಪ್ರಾರ್ಥಿಸಿದ್ದಾರೆ.
ಬರಡಾದ ಬದುಕಿಗೆ ಬೆಳಕು ನೀಡಿ ಕಾಪಾಡು ತಂದೆ ಎಂದು
ಬೇಡಿಕೊಂಡಿದ್ದಾರೆ.
ಮುಂದಿನ ಇವರ ಭಾವಗೀತೆ
‘ಒಲವ ತೇರು ‘ ಪ್ರೀತಿಗಿರುವ ಶಕ್ತಿಯೇ ಅಂಥದ್ದು. ನಲ್ಲಿ ನಲ್ಲೆಯರ ನೋಟ,ಅವರ ಗುಣ ಸ್ವಭಾವ, ಅವರ ಪ್ರೀತಿಯ ಮಾತುಗಳು ಎಂಥವರನ್ನೂ ಮರುಳು ಮಾಡುತ್ತವೆ.ಪ್ರೀತಿಗಿರುವ ಶಕ್ತಿಯನ್ನು ಕವಿ ಈ ಗೀತೆಯ ಮೂಲಕ ಅನಾವರಣ ಮಾಡಿದ್ದು ಹೀಗಿದೆ.

” ಒಲವ ತೇರನು ಏರಿ ಹಾಡುವ,
ಚೆಲುವ ಬಾಳಿನ ರಾಗವ
ತಡೆವ ಮನವನು ಮೀರಿ ಸಾಗುವ, ನಲಿದು ಬಾನಲಿ ತೇಲುವ,
ಗೆಲುವ ಹಾದಿಯ ನಿತ್ಯ ಹುಡುಕುತ,
ಬದುಕ ಬಂಡಿಯ ನಡೆಸುವ
ಒಲಿದ ನಲ್ಲೆಯ ಪ್ರೀತಿ ಸವಿಯುತ,
ಗಗನ ಚುಂಬಿಸಿ ಹಾರುವ …..

ಜೀವ ಭಾವದ ಮಧುರ ಸಂಗಮ,
ದೇವಗಣವನು ಸೆಳೆಯಿತು,
ಒಲವ ತೇರಲಿ ಕುಳಿತು ಸಾಗಲು
ಭಕ್ತಿ ಗಣವದು ಹರಸಿತು.” ಎಂದು ಒಲವಿನ ತೇರಿನ ಮೂಲಕ ಸಂತಸದ, ನೆಮ್ಮದಿಯ ಬದುಕನು ಬದುಕೋಣ, ಎನ್ನುತ್ತಾರೆ.

ಪ್ರೇಮ ಭಾವ ಸ್ಫುರಿಸುವ ಹೃದಯ ನರ್ತನ, ಶೃಂಗಾರದರಸಿ,ರಾಣಿ ಜೇನಿನ ಬಯಕೆ,ಪ್ರೇಮ ಸುಧೆ,ನಲ್ಲನಾಗಮನ, ಮುಸ್ಸಂಜೆ ಪ್ರಣಯ,ಅಂದದ ಬಳೆಗಳು, ಮುಂತಾದ ಕವಿತೆಗಳು ಗಂಡು -ಹೆಣ್ಣಿನ ಪ್ರೀತಿ, ಪ್ರೇಮ,ಸಮಾಗಮ
ಮಿಲನ,ಗಳಿಗೆ ಸಂಬಂಧಿಸಿದ್ದು
ಓದುಗರ ಮನಸ್ಸಿಗೆ ಮುದ ನೀಡುತ್ತವೆ.

ದೇಶಕ್ಕೆ ಅಷ್ಟೇ ಅಲ್ಲ ,ಜಗತ್ತಿಗೇ ಅನ್ನ ನೀಡುವ ರೈತನ ಕುರಿತು ,
ಭೂಮಿ ಪುತ್ರ,ಎಂಬ ಭಾವಗೀತೆ ಯಲ್ಲಿ ಹೇಳಿರುವ ಮಾತುಗಳು ಹೀಗಿವೆ.

“ಭೂಮಿ ಪುತ್ರನು ಇಳೆಯ ಕಂದನು,
ಧರಣಿ ನಂಬಿದ ಅನ್ನದಾತನು,
ಸ್ವಾಮಿ ನಿಷ್ಠೆಯ ಚೊಕ್ಕ ಮನಸಿನ ,
ಮೋಸ ಅರಿಯದ ಭಾಗ್ಯದಾತ

ಸಕಲ ಜೀವಿಗೆ ಅನ್ನ ನೀಡುತ
ಮನದಿ ಸಾರ್ಥಕ ಹೊಂದುವಾತ,
ಎಷ್ಟೇ ವ್ಯಾಕುಲವಿರಲಿ ಬದುಕಲಿ,
ನಗುತ ಜೀವನ ದೂಡುವಾತ.’ ಎಂದು ರೈತರ ಬದುಕಿನ ಬವಣೆಯ ಚಿತ್ರಣವನ್ನು ನೀಡಿದ್ದಾರೆ. ಅದೇ ರೀತಿಯಾಗಿ
ರೈತರಿಲ್ಲದ ಭೂಮಿ -ಬರಡು,ಎಂಬ ಕವಿತೆಯಲ್ಲಿ
ಬಡತನದ ಬೇಗೆಯಲ್ಲಿ ಬೆಂದರೂ, ಸ್ವಾಭಿಮಾನ ಬಿಡದೆ ಇತರ ರೈತರ ಬದುಕು ಹಸನಾಗಿರಲಿ, ಎಂದು ಆಶಿಸುವ,ರೈತನ ಈ ಗುಣ, ಅವನ ದೊಡ್ಡತನ ಕ್ಕೆ ಸಾಕ್ಷಿಯಾಗಿದೆ.
ನಿಸರ್ಗದ ಸೌಂದರ್ಯವನ್ನು ಎಲ್ಲರೂ ಆಸ್ವಾದಿಸಬೇಕು, ಅದರಲ್ಲೂ ಕವಿಗಳು ಕಡ್ಡಾಯವಾಗಿ ಪ್ರಕೃತಿಯ ಚೆಲುವನ್ನು ಆಸ್ವಾದಿಸುವುದಲ್ಲದೆ ಆರಾಧಿಸುತ್ತಾರೆ, ಇದಕ್ಕೆ ಈರಪ್ಪ ಬಿಜಲಿ ಯವರೂ ಹೊರತಲ್ಲ,, ಯಾಕೆಂದರೆ ಅವರದು ಕವಿ ಹೃದಯ.
ಪ್ರಕೃತಿ ಸೌಂದರ್ಯ ಕುರಿತಾಗಿ ಶಾಂತಿ ನಿವಾಸ,ಅರುಣ -ಕಿರಣ, ಚುಮುಚುಮು ನಸುಕಿನಲಿ,
ತಾಯಿ ಮಡಿಲು,ನನ್ನೆದೆಯ ಬಾಂದಳದಿ ತಾರೆ ನೀನು, ಹಸಿರ ವನಸಿರಿ ,ಸೋನೆ ಮಳೆ,
ಮುಂತಾದ ಕವಿತೆಗಳಲ್ಲಿ ನಿಸರ್ಗ ಸೌಂದರ್ಯದ ಆಸ್ವಾದನೆ ಯೊಂದಿಗೆ, ಪ್ರೇಯಸಿಯ,ನಲ್ಲೆಯ, ಬಾಹ್ಯ,
ಮತ್ತು ಆಂತರಿಕ ಸೌಂದರ್ಯವನ್ನೂ ಆಸ್ವಾದಿಸುವುದನ್ನು ಕಾಣಬಹುದು.
ಕವಿ ಕಲ್ಪನಾ ಲೋಕದಲ್ಲಿ ತೇಲಾಡುವ, ಓಲಾಡುವ ಭಾವಜೀವಿ, ಕವಿಗೆ ದೇಶಾಭಿಮಾನ, ಸ್ವಾಭಿಮಾನಗಳ ಪ್ರಜ್ಞೆ ಇರಬೇಕಾಗುತ್ತದೆ, ಅಂತಹ ಕೆಲವು ಭಾವಗೀತೆಗಳೂ ಈ ಸಂಕಲನದಲ್ಲಿವೆ.
ಉದಾಹರಣೆಗೆ,ಭಾಗ್ಯದಾತೆ -ಭರತ ಮಾತೆ, ಸ್ವಾತಂತ್ರೋತ್ಸವ,ವಿವೇಕ ವಾಣಿ,ಅಂಬುಜೆ ರಕ್ಷಿಸು, ಮುಂತಾದ ಕವಿತೆಗಳು
ಪ್ರತಿಯೊಬ್ಬರಲ್ಲಿಯೂ ಜಾಗೃತಿಯನ್ನು ಉಂಟು ಮಾಡುತ್ತವೆ.

ಶ್ರೀ ಈರಪ್ಪ ಬಿಜಲಿ.
ಶಿಕ್ಷಕರು, ಸಾಹಿತಿಗಳು.
ಭಾಗ್ಯನಗರ -ಕೊಪ್ಪಳ.

ಒಟ್ಟಿನಲ್ಲಿ ಈರಪ್ಪ ಬಿಜಲಿ ಯವರ”ಶ್ವೇತ ಹೃದಯ”ದ ಈ ಭಾವಗೀತೆಗಳು ಓದುಗರ ಮನಕ್ಕೆ ತಂಪು, ಮತ್ತು ಕಿವಿಗಳಿಗೆ ಇಂಪು ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಹೇಳುತ್ತಾ ಈ ಶ್ವೇತ ಹೃದಯ
ಪುಸ್ತಕಾವಲೋಕನ ಬರಹಕ್ಕೆ
ವಿರಾಮ ನೀಡುವೆ.

  • ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು. ಸ.ಪ್ರ.ದ.ಮಹಿಳಾ ಕಾಲೇಜು, ಕೊಪ್ಪಳ. ೫೮೩೨೩೧.
    ಮೊಬೈಲ್ ಸಂಖ್ಯೆ. 7996790189.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ