ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಕೃತಿಯನ್ನು ಪೂಜಿಸುವುದು ಮತ್ತು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ : ವನಸಿರಿ ಅಮರೇಗೌಡ ಮಲ್ಲಾಪುರ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ PWD ಕ್ಯಾಂಪ್ ನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹತ್ತಿರ ಸರಕಾರಿ ಶಾಲೆಗಳನ್ನು ಹಸಿರುಕರಣಗೊಳಿಸಲು ವನಸಿರಿ ಫೌಂಡೇಶನ್ ಹಾಗೂ ಶ್ರೀ ರೇಣುಕಾ ನರ್ಸಿಂಗ್ ಕಾಲೇಜು ಸಿಂಧನೂರು ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 5 ಸಾವಿರ ಸಸಿಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸಲಿಂಗಪ್ಪ ಮಾತನಾಡಿ ನಮ್ಮ ಸುತ್ತಮುತ್ತಲಿನ ವಾತಾವರಣ ಸುಂದರವಾಗಿ ಮತ್ತು ಅರೋಗ್ಯಕರವಾಗಿ ಇರಬೇಕಾದರೆ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರುಕರಣಗೊಳಿಸಲು ವನಸಿರಿ ಫೌಂಡೇಷನ್ ಜೊತೆಗೆ ಕೈಜೋಡಿಸುವ ಮೂಲಕ ಪ್ರಕೃತಿಗೆ ನಮ್ಮದೇ ಆದ ಕೊಡುಗೆ ನೀಡೋಣ ಎಂದರು.

ನಂತರ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಕೇವಲ ಜೂನ್ 5ಕ್ಕೆ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿ ದಿನ ಪರಿಸರ ದಿನಾಚರಣೆ ಮಾಡಬೇಕು, ಇದರಿಂದ ಶುದ್ಧವಾದ ಆಮ್ಲಜನಕ ಪಡೆಯುತ್ತೇವೆ, ಭೂಮಿಯ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ, ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.

ನಂತರ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ, ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಮ್ಮ ವನಸಿರಿ ಫೌಂಡೇಷನ್ ತಂಡದ ವತಿಯಿಂದ ಸರಕಾರಿ ಶಾಲೆಗಳನ್ನು ಹಸಿರುಕರಣಗೊಳಿಸಲು 5 ಸಾವಿರ ಸಸಿಗಳನ್ನು ಉಚಿತವಾಗಿ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ. ನಾಳೆ ವಿಶ್ವ ಪರಿಸರ ದಿನಾಚರಣೆ ಹಬ್ಬ ಇದೆ. ಪ್ರಕೃತಿಯನ್ನು ಪೂಜಿಸಿ ಆರಾಧಿಸುವ ಹಬ್ಬವಾಗಿದೆ. ಪ್ರಕೃತಿಯನ್ನು ಪೂಜಿಸುವುದು ಮತ್ತು ಪೋಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ಈ ಗಿಡಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸೋಣ ಎಂದರು.

ಬಸಲಿಂಗಪ್ಪ ಮುರಡಿ ಶಿಕ್ಷಕರು ಮಾತನಾಡಿ ಒಂದು ಜೀವಂತ ಮರ ಒಂದು ಕೋಟಿಗೆ ಸಮವಾಗಿದೆ, ಹೇಗೆಂದರೆ ಆಮ್ಲಜನಕ, ಆಶ್ರಯ,ಗಿಡ,ನೆರಳು ಹಾಗೂ ಪಕ್ಷಿಗಳಿಗೆ ಕೊಟ್ಟಂತ ಆಹಾರ ಎಲ್ಲವೂ ಕೂಡಿ ಒಂದು ಕೋಟಿಗೆ ಸಮವಾಗುತ್ತದೆ. ಆದ್ದರಿಂದ ನಾವೆಲ್ಲರೂ ಜೀವಂತ ಮರಗಳನ್ನು ಬೆಳಸೋಣ. ಪ್ರತಿಯೊಬ್ಬರೂ ಒಂದೊಂದು ಗಿಡ ಬೆಳಸೋಣ. ಇವತ್ತು ಸಿಂಧನೂರು ಹಸಿರುಕರಣಗೊಳ್ಳಲು ವನಸಿರಿ ಫೌಂಡೇಷನ್ ತಂಡದ ಪರಿಶ್ರಮವೇ ಕಾರಣ, ಹಾಗಾಗಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ವನಸಿರಿ ಫೌಂಡೇಷನ್ ಜೊತೆಗೆ ಕೈಜೋಡಿಸೋಣ ಎಂದರು.

ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ, ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಬಸಲಿಂಗಪ್ಪ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗೋಪಾಲ ವ್ಯವಸ್ಥಾಪಕರು, ರೇಣುಕಾ ನರ್ಸಿಂಗ್ ಕಾಲೇಜು ಅಧ್ಯಕ್ಷರಾದ ಎಂ ಅಮರೇಗೌಡ ಪಾಟೀಲ್ ಹಿರಿಯ ವಕೀಲರು ಮತ್ತು ಡಾ.ಎಂ.ವೀರಭದ್ರಗೌಡ ಪಾಟೀಲ್, ಚಂದ್ರಶೇಖರ ಹಿರೇಮಠ ಸರಕಾರಿ ನೌಕರರ ಸಂಘ, ಬಸಲಿಂಗಪ್ಪ ಮುರಡಿ ಶಿಕ್ಷಕರುಶಿಕ್ಷಕರಾದ ಛತ್ರಪ್ಪ, ಜಗದೀಶ್, ಅರ್ಚನಾ ವನಸಿರಿ ತಂಡದ ಸದಸ್ಯರಾದ ಚನ್ನಪ್ಪ ಕೆ ಹೊಸಹಳ್ಳಿ, ಮುದುಕಪ್ಪ ಹೊಸಳ್ಳಿ ಕ್ಯಾಂಪ್, ರಾಜು ಪತ್ತಾರ, ಯಮನೂರ ಬುಡಕುಂಟಿ ಕೆ.ಹೊಸಹಳ್ಳಿ ಹಾಗೂ ರೇಣುಕಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ